ರಾಷ್ಟ್ರ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ದೊಡ್ಡದು- ಬಸವರಾಜ ಹೆಳವರ

0
30

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಬುಧವಾರ ಸರ್. ಎಂ. ವಿಶ್ವೇಶ್ವರಯ್ಯ ಜಯಂತ್ಯೊತ್ಸವ ನಿಮಿತ್ಯ  ಇಂಜಿನಿಯರ್ ದಿನಾಚರಣೆಯನ್ನು ಕೆಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಬಡಾವಣೆಯ  ಇಂಜಿನಿಯರ್ಸ್ ಗಳಾದ ವಿಶಾಲ ಬೋಳಶೆಟ್ಟಿ, ಸೂರ್ಯಕಾಂತ ಸಾವಳಗಿ, ಡಿ.ವಿ ಕುಲಕರ್ಣಿ ಹಾಗೂ ಬಸವರಾಜ ಹೆಳವರ ಯಾಳಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವಿಕರಿಸಿ ಮಾತನಾಡಿದ ಅಭಿಯಂತರ ಡಿ.ವಿ ಕುಲಕರ್ಣಿ ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕ ಶಕ್ತಿ ಸರ್.ಎಂ. ವಿಶ್ವೇಶ್ವರಯ್ಯನವರು. ಇವರು ದೂರದೃಷ್ಟಿ ಹೋಂದಿದ ಒಬ್ಬ ಮಹಾನ ಸಾಧಕ. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ನಮ್ಮ ಯುವ ಪೀಳಿಗೆ ಅರಿತು ಕೊಳ್ಳಬೇಕು ಹಾಗೂ ನಾಡಿನ ಎಲ್ಲಾ ಅಭಿಯಂತರರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಬಡಾವಣೆಯ ಅದ್ಯಕ್ಷ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ಸುನೀಲಕುಮಾರ ಒಂಟಿ, ವಿರೇಶ ಬೋಳಶೆಟ್ಟಿ ನರೋಣಾ, ವಿಜಯಲಕ್ಷ್ಮಿ ವಿ. ಬೋಳಶೆಟ್ಟಿ, ಶ್ರೀನಿವಾಸ ಬುಜ್ಜಿ, ಚಂದ್ರು ಮಲ್ಕಾಪುರೆ, ವಿವೇಕ ಬೋಳಶೆಟ್ಟಿ ಮತ್ತು ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here