ಸುರಪುರ: ತಾಲೂಕಿನ ವಿವಿಧ ಶಾಲೆಗಳಿಗೆ ಲೋಕಾಯುಕ್ತ ಪಿಐ ಅರುಣಕುಮಾರ ಭೇಟಿ

0
8

ಸುರಪುರ: ತಾಲೂಕಿನ ಕೃಷ್ಣಾಪುರ,ದೇವಿಕೇರಾ,ರತ್ತಾಳ, ದೇವರಗೋನಾಲ,ಮಾಚಗುಂಡಾಳ ಮತ್ತು ಮಾಲಗತ್ತಿ ಶಾಲೆಗಳಿಗೆ ಲೋಕಾಯುಕ್ತ ಪೊಲೀಸ್ ಇನ್ಸ್ಪೇಕ್ಟರ್ ಅರುಣಕುಮಾರ ಭೇಟಿ ನೀಡಿದರು.

ಗುರುವಾರ ಬೆಳಿಗ್ಗೆಯಿಂದ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು,ಗೌರವಾನ್ವಿತ ಲೋಕಾಯುಕ್ತರ ಆದೇಶದಂತೆ ಹಾಗು ಲೋಕಾಯುಕ್ತ ಎಸ್ಪಿಯವರಾದ ಎ.ಆರ್.ಕರ್ನೂಲರವರ ಮಾರ್ಗದರ್ಶನದಂತೆ ಇಂದು ತಾಲೂಕಿನ ವಿವಿಧ ಗ್ರಾಮಗಳ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.ಅಲ್ಲದೆ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಎಲ್ಲಾ ಶಾಲೆಗಳಲ್ಲಿನ ಸ್ವಚ್ಛತೆ ಪರಿಶೀಲನೆಯನ್ನು ನಡೆಸಿದರು ಮತ್ತು ಅಡುಗೆ ಕೋಣೆಗಳನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಸುರೇಶ ಮಾಮನಿ, ಹೆಚ್.ಸಿಗಳಾದ ಹಣಮಂತರಾಯ,ನಾಗರಾಜ ಹಾಗು ಪಿ.ಸಿ ಮಲ್ಲಿಕಾರ್ಜುನ ಸೇರಿದಂತೆ ಎಲ್ಲಾ ಶಾಲೆಗಳ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here