ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಗುತ್ತೇದಾರ ಚಾಲನೆ

0
61

ಆಳಂದ: ಪಟ್ಟಣದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸುವ ಮೂಲಕ ಶಾಸಕ ಸುಭಾಷ ಗುತ್ತೇದಾರ ಅವರು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಇಂದಿಲ್ಲಿ ಚಾಲನೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣ ಹತ್ತಿರದಲ್ಲಿ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನ ವೇದಿಕೆಯಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಅವರಿಗೆ ಪ್ರಾಥಮಿಕ ಸದಸ್ಯತ್ವ ಅರ್ಜಿಗೆ ಸಹಿ ಹಾಕಿದ ಶಾಸಕರು ನಂತರ ತಮ್ಮ ಮೊಬೈಲ್ ಮೂಲಕ ಕೇಂದ್ರ ಕಚೇರಿಗೆ ಮಿಸ್ಡ್ ಕಾಲ್ ನೀಡಿ ಅಧಿಕೃತವಾಗಿ ಸದಸ್ಯತ್ವ ಪಡೆದರು.
ಬಳಿಕ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಸರ್ಕಾರದ ಕೈಬಲಪಡಿಸಲು ಪಕ್ಷದ ಹೆಚ್ಚಿನ ಸದಸ್ಯತ್ವ ಕೈಗೊಳ್ಳಲು ಕಾರ್ಯಕರ್ತರು ಶ್ರಮಿಸಬೇಕು. ಕ್ಷೇತ್ರದಿಂದ ಈ ಹಿಂದೆ ೫೦ ಸಾವಿರ ಸದಸ್ಯತ್ವ ಜಾಗದಲ್ಲೀಗ ೮೦ ಸಾವಿರ ಸದಸ್ಯತ್ವ ಗುರಿಯನ್ನು ತಲುಪಬೇಕು ಎಂದರು.

Contact Your\'s Advertisement; 9902492681

ರಾಜ್ಯ ಸರ್ಕಾರ ಯಾವ ಗಳಿಗೆಯಲ್ಲಿ ಪತನವಾಗುತ್ತದೋ ಗೊತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಪರ್ವ ಶುರವಾಗಿದ್ದರಿಂದ ಸರ್ಕಾರ ಅಭದ್ರವಾಗಿದೆ. ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು. ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಮಾತನಾಡಿ, ಭಾರತೀಯ ಜನತಾ ಪಕ್ಷವನ್ನು ವಿಶ್ವದಲ್ಲೆ ಅತ್ತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಮೂರು ವರ್ಷಕ್ಕೊಮ್ಮೆ ಬರುವ ಈ ಸದಸ್ಯತ್ವ ಅಭಿಯಾನದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಕೈಗೊಳ್ಳಲು ನಿರ್ಧರಿಸಲಾಗಿದೆ. ಎಲ್ಲ ವರ್ಗ ಮತ್ತು ಜನಾಂಗದ ಮನೆ ಬಾಗಿಲಿಗೆ ಹೋಗಿ ಕಾರ್ಯಕರ್ತರು ಸದಸ್ಯತ್ವನ್ನು ಪಡೆಯಬೇಕು ಎಂದರು.

ನಿವೃತ್ತ ಸೇನಾನಿ ಬಸವರಾಜ ಬಿರಾದಾರ ನೆಲ್ಲೂರ, ಪ್ರಧಾನ ಕಾರ್ಯದರ್ಶಿ ಮಹೇಶ ಗೌಳಿ ಮತ್ತಿತರರು ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣ ಎಚ್. ಮಲಾಜಿ, ಸದಸ್ಯ ಹರ್ಷಾನಂದ ಗುತ್ತೇದಾರ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣಾ ಗೌಳಿ, ಉದ್ಯಮಿ ಚನ್ನಬಸವ ಪಾಟೀಲ, ಹಣಮಂತರಾವ್ ಮಲಾಜಿ, ಆದಿನಾಥ ಹೀರಾ, ರೈತ ಮೋರ್ಚಾ ಅಧ್ಯಕ್ಷ ರಮೇಶ ಮೂಲಗೆ, ಗ್ರಾಪಂ ಮಾಜಿ ಅಧ್ಯಕ್ಷ ಶಿವುಪುತ್ರ ಬೆಳ್ಳೆ, ಮಲ್ಲಣ್ಣಾ ನಾಗೂರೆ, ಚಂದ್ರಾಮಪ್ಪ ಘಂಟೆ, ಆನಂದ ಗಾಯಕವಾಡ, ಚನ್ನು ಕಾಳಕಿಂಗೆ, ಶ್ರೀಮಂತ ನಾಮಣೆ, ವಿಜಯಕುಮಾರ ಕೋಥಳಿಕರ್, ಶ್ರೀಶೈಲ ಖಜೂರಿ, ಅಪ್ಪಾಸಾಹೇಬ ಗುಂಡೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಸದಸ್ಯತ್ವ ಅಭಿಯಾನದ ಸಂಚಾಲಕ ಶರಣು ಕುಮಸಿ ಮತ್ತು ಪ್ರಕಾಶ ಮಾನೆ ಕಾರ್ಯಕ್ರಮ ನಿರೂಪಿಸಿ ವಂದಿಸಿರು. ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಸದಸ್ಯತ್ವ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here