ಖ್ವಾಜಾ ಬಂದೇ ನವಾಜ್ ದರ್ಗಾದ ಹತ್ತಿರ ಯುವಕನ ಕೊಲೆ

0
269

ಕಲಬುರಗಿ: ನಗರದ ಖ್ವಾಜಾ ಬಂದೇ ನವಾಜ್ ದರ್ಗಾದ ಪಾಯನ್ ಕೆರೆ ಬಳಿ ಯುವನ ಬರ್ಬರ ಹತ್ಯೆ ಮಾಡಿ ಬಿಸಾಡಿರುವ ಘಟನೆ ಸಂಜೆ ಸುಮಾರು 5 ರಿಂದ 6 ಸುಮಾರಿಗೆ ನಡೆದಿದೆ.

ಶಾರೂಕ್ ಶಮಶೋದ್ದಿನ್ (24) ಕೊಲೆಯಾದ ಯುವಕ, ಮೂಲತಃ ಕಲಬುರಗಿ ಜಿಲ್ಲೆಯ ಕೋಟನೂರ ಗ್ರಾಮದ ನಿವಾಸಿಯಾಗಿದ್ದ ಈತ, ನಗರದ ಖ್ವಾಜಾ ಬಂದೇ ನವಾಜ್ ದರ್ಗಾದ ಪಾಯನ್ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದ್ದು, ಇಂದು ದರ್ಗಾದ ಕೆರೆ ಹತ್ತಿರ ಶಾರೂಕ್ ನ್ನು ಕೊಂಡೊಯಿದು ಬರ್ಬರವಾಗಿ ಕೊಲೆ ಮಾಡಿ ಬಿಸಾಡಿರುವ ಘಟನೆ ನಡೆದಿದೆ.

Contact Your\'s Advertisement; 9902492681

ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ಮೇಲ್ನೊಟಕ್ಕೆ ವೈಯಕ್ತಿಕ ದ್ವೇಷ ಕಾರಣಕ್ಕೆ ಕೊಲೆಯಾಗಿರ ಬಹುದೆಂದು ಅನುಮಾನವ ವ್ಯಕ್ತವಾಗುತ್ತಿದೆ.

ಈ ಕುರಿತು ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣ ಮತ್ತು ಹತ್ಯೆ ಮಾಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here