Tuesday, July 16, 2024
ಮನೆಬಿಸಿ ಬಿಸಿ ಸುದ್ದಿನಾಳೆ ಬಿಎಸ್ಪಿ ಜಿಲ್ಲಾ ಮಟ್ಟದ ಸಮಾವೇಶ

ನಾಳೆ ಬಿಎಸ್ಪಿ ಜಿಲ್ಲಾ ಮಟ್ಟದ ಸಮಾವೇಶ

ಕಲಬುರಗಿ: ಬಹುಜನ ಸಮಾಜ ಪಕ್ಷದಿಂದ ಸೆ.೩೦ರಂದು ೧೦.೩೦ಕ್ಕೆ ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಬಹುಜನರ ನಡಿಗೆ ಅಧಿಕಾರ ಕಡೆಗೆ ಎನ್ನುವ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಯನ್ನು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.  ಕಾರ್ಯಕರ್ತರ ಸಂಘಟನೆ ಕುರಿತು, ಹಾಗೂ ಮುಂಬರುವ ತಾಪಂ. ಜಿಪಂ ಎಲೆಕ್ಷನ್ ಕುರಿತು  ಸಮಾವೇಶದಲ್ಲಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಾಗುವುದು. ಬೂತ್ ಮಟ್ಟದಿಂದ ಡೊಡ್ಡ ಮಟ್ಟದ ವರೆಗೆ ಕಾರ್ಯಕರ್ತರ ಪಡೆ ತಯಾರಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸಭಾ ಸದಸ್ಯ ರಾಮ್ ಗೌತಮ, ರಾಜ್ಯ ಉಸ್ತುವಾರಿಗಾಳಾದ  ಮಾರಸಂದ್ರ ಮುನಿಯಪ್ಪ, ಸುರೇಂದ್ರ ಸಿಂಗ್ ಕಲೋರಿಯಾ, ಎಂ.ಗೋಪಿನಾಥ್, ದಿನೇಶ್ ಗೌತಮ, ರಾಜ್ಯ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ನಿಂಬಾಳ್ಕರ್, ಜಿಲ್ಲಾ ಸಂಯೋಜಕರಾದ ಕೆ.ಪ್ರಕಾಶ, ಮೈಲಾರಿ ಸೇರಿದಂತೆ ಸಮಾವೇಶದಲ್ಲಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಎಲ್.ಆರ್.ಬೋಸ್ಲೆ, ಕೆ.ಪ್ರಕಾಶ, ಜೈಭೀಮ ಸಿಂಧೆ, ಶರಣಬಸಪ್ಪ ಸುಗೂರ, ಗೋರಕನಾಥ ದೊಡ್ಡಮನಿ, ಪ್ರಕಾಶ ಸಾಗರ್ ಇತರರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular