ಕಲಬುರಗಿ: ನಗರದ ವಾರ್ಡ್.೫೦,೫೩.ರಲ್ಲಿರುವ ವಿವಿಧ ಬಡಾವಣೆಯಲ್ಲಿ ಗಿರಿಜನ ಉಪಯೋಜನೆ ಅಡಿಯಲ್ಲಿ (ಎಸ್ಟಿಪಿ) ಅನುದಾನದಲ್ಲಿ ೫೦.ಲಕ್ಷ ವೇಚ್ಚದ ಸಿಸಿ ರಸ್ತೆ, ಒಳ ಚರಂಡಿ ನಿರ್ಮಾಣ, ಕುಡಿಯುವ ನೀರು ಮತ್ತು ಪೈಪಲೈನ ಕಾಮಗಾರಿಗೆ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಂದಕುಮಾರ ಮಾಲಿಪಾಟೀಲ, ವಿಶ್ವನಾಥ ಸಾಲಿಮಠ, ನಾಗರಾಜ ಪಾಟೀಲ, ಕುಪೇಂದ್ರ ಶಾಪೂರಕರ್, ಹರೀಶ ರೆಡ್ಡಿ, ಜಗ್ಗು ಶಾಹಪೂರ, ಬಡಾವಣೆಯ ಮುಖಂಡರು ಇದ್ದರು.