ಹಂದ್ರಾಳ ಎಸ್.ಡಿ ಗ್ರಾಮದಲ್ಲಿ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ

0
14

ಸುರಪುರ: ತಾಲೂಕಿನ ಹಂದ್ರಾಳ ಎಸ್.ಡಿ ಗ್ರಾಮದಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ವಿಠ್ಠಲ್ ಎಂದು ಹೇಳಲಾಗುತ್ತಿದ್ದು,ವಿಠ್ಠಲ್ ಹುಣಸಗಿಯಿಂದ ಹಂದ್ರಾಳ ಗ್ರಾಮಕ್ಕೆ ಕ್ಷೌರ ಮಾಡಲು ಆಗಮಿಸುತ್ತಿದ್ದ.ಪ್ರತಿಬಾರಿ ಹುಣಸಗಿಯಿಂದ ಆಗಮಿಸಿ ಗ್ರಾಮದಲ್ಲಿಯೇ ಎರಡು ಮೂರು ದಿನಗಳಿದ್ದು ಜನರಿಗೆ ಕ್ಷೌರ ಮಾಡುತ್ತಿದ್ದ ಎನ್ನಲಾಗಿದೆ.ಶನಿವಾರ ಕ್ಷೌರ ಮಾಡಿ ರಾತ್ರಿ ಗ್ರಾಮದಲ್ಲಿನ ಹೋಟೆಲ್ ಒಂದರ ಬಳಿಯಲ್ಲಿ ಮಲಗಿದಾಗ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಆಗಮಿಸಿ ವಿಠ್ಠಲ್ ಬಳಿಯಲ್ಲಿನ ಹಣ ಕೊಡುವಂತೆ ಕೇಳಿದ್ದು,ಹಣ ಕೊಡಲು ನಿರಾಕರಿಸಿದಾಗ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

Contact Your\'s Advertisement; 9902492681

ಬಂದಿದ್ದ ಎಲ್ಲರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.ಚಾಕುವಿನಿಂದ ಹಲ್ಲೆಗೊಳಗಾಗಿ ಗಾಯಗೊಂಡ ವಿಠ್ಠಲ್‌ಗೆ ಸದ್ಯ ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here