ಚೌಡೇಶ್ವರಿಹಾಳ ಗ್ರಾಮದ ಮಹಿಳೆ ಹತ್ಯೆ ಸಂತ್ರಸ್ತ ಕುಟುಂಬಕ್ಕೆ ಭೀಮಣ್ಣ ಬಿಲ್ಲವ್ ಭೇಟಿ

0
15

ಸುರಪುರ: ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ದುಷ್ಕರ್ಮಿಯಿಂದ ಹತ್ಯೆಗೊಳಗಾದ ಮಹಿಳೆಯ ಕುಟುಂಬಕ್ಕೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ್ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಅಲ್ಲದೆ ಇದೇ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ೧೦ ಸಾವಿರ ರೂಪಾಯಿಗಳ ನೆರವು ನೀಡಿ ಘಟನೆಗೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ಮುಖಂಡರಾದ ಮಾನಪ್ಪ (ದಾಡಿ),ಕಲಬುರ್ಗಿಯ ಡಾ:ಬಾಬು ಜಗಜೀವನರಾಮ್ ಸಂಘದ ಅಧ್ಯಕ್ಷ ದಶರಥ ಕಲಬುರ್ಗಿ, ರಾಜು ಎಸ್.ಕಟ್ಟಿಮನಿ,ಬಸವರಾಜ ಮುಷ್ಠಳ್ಳಿ,ಸಚಿನ್ ಆರ್.ಕಟ್ಟಿಮನಿ,ಶಿವಶಂಕರ ಬಂದರವಾಡ,ದೇವೆಂದ್ರ ಬಿಳವಾರ,ಚಂದಪ್ಪ ಕಟ್ಟಿಮನಿ,ಹರಿಶ್ಚಂದ್ರ ದೊಡ್ಮನಿ,ಶಿವು ಕಟ್ಟಿಮನಿ,ಮಲ್ಲಿಕಾರ್ಜುನ ಮಾಳಗಿ ಸೇರಿದಂತೆ ಅನೇಕ ಜನ ಮುಖಂಡರು ಹಾಗು ಸಂತ್ರಸ್ತ ಕುಟುಂಬದ ಸದಸ್ಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here