ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

0
86

ಕಲಬುರಗಿ: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ ಕಲಬುರ್ಗಿ ಇವರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಲೇಖಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಲೇಖಕರಿಗೆ ಪ್ರಶಸ್ತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ.

ಈಗಾಗಲೇ ಕಳೆದ ವರ್ಷ ಪ್ರಶಸ್ತಿಗಳನ್ನು ನೀಡಲಾಗಿದ್ದು, ಅದರಂತೆ ಪ್ರಸ್ತುತ 2020 ರಲ್ಲಿ ಪ್ರಕಟವಾದ ಕವನ ಸಂಕಲನ,ಕಥಾ ಸಂಕಲನ, ಕಾದಂಬರಿ,ಮಹಿಳಾ ಸಾಹಿತ್ಯ ಹಾಗೂ ಸಂಕೀರ್ಣ ವಿಭಾಗಕ್ಕೆ ಸಂಬಂಧಿಸಿದ ಕೃತಿಗಳನ್ನು ಆಹ್ವಾನಿಸಲಾಗಿದ್ದು ಲೇಖಕರು ಕಲಬುರ್ಗಿ, ಯಾದ್ಗೀರ, ರಾಯಚೂರು, ಕೊಪ್ಪಳ, ಬೀದರ ಜಿಲ್ಲೆಗಳ ನಾಗರಿಕರಾಗಿರಬೇಕು. ಕನ್ನಡನಾಡು ಪ್ರಕಾಶನದ ಪುಸ್ತಕಗಳನ್ನು ಮತ್ತು ಸಂಘದ ಆಡಳಿತ ಮಂಡಳಿಯ ಸದಸ್ಯರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.

Contact Your\'s Advertisement; 9902492681

ಪ್ರಶಸ್ತಿಗಳು ಐದು ಸಾವಿರ ನಗದು ಪ್ರಮಾಣಪತ್ರ ಒಳಗೊಂಡಿದ್ದು, 2020 ರಲ್ಲಿ ಪ್ರಕಟವಾದ ಉತ್ತಮ ಕಥಾಸಂಕಲನ,ಉತ್ತಮ ಕವನ ಸಂಕಲನ,ಉತ್ತಮ ಕಾದಂಬರಿ, ಉತ್ತಮ ಮಹಿಳಾ ಸಾಹಿತ್ಯ ಮತ್ತು ಸಂಕಿರ್ಣ ವಿಭಾಗದಲ್ಲಿ ಉತ್ತಮ ಕೃತಿಗೆ ಪ್ರಶಸ್ತಿ ನೀಡಲಾಗುವುದು.

ಇದೇ ತಿಂಗಳು 30. 10. 2021 ರಂದು ಕೊನೆಯ ದಿನವಾಗಿದ್ದು,ತಮ್ಮ ವೈಯಕ್ತಿಕ ಪರಿಚಯದೊಂದಿಗೆ ಮೂರು (3)ಪ್ರತಿಗಳನ್ನು ಕನ್ನಡ ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ ಜಿ 2 ವಿ. ವಿ.ಹಾಸ್ಟೆಲ್ ಕಾಂಪ್ಲೆಕ್ಸ್ ಸೇಡಂ ರಸ್ತೆ ಕಲಬುರಗಿ 585105 ವಿಳಾಸಕ್ಕೆ ಕಳಿಸಿಕೊಡಲು ಕೋರಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಅಪ್ಪಾರಾವ್ ಅಕ್ಕೋಣೆ 9448570985,ಡಾ. ಸ್ವಾಮಿರಾವ್ ಕುಲಕರ್ಣಿ 94483 33539 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಎಂದು ಸಂಚಾಲಕ ಡಾ. ಶರಣಬಸಪ್ಪ ವಡ್ಡನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here