ದಿ. ಮಾರುತಿ ಟಿ.ಮಾನಪಡೆ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ನಾಳೆ

0
26

ಕಲಬುರಗಿ: ನಾಳೆ ಬೆಳಿಗ್ಗೆ ದಿನಾಂಕ 20.10.21 ರಂದು ಹೋರಾಟ ರತ್ನ ಕರ್ನಾಟಕ ರಾಜ್ಯದ ಪ್ರಾಂತ ರೈತ ಸಂಘ ಅಧ್ಯಕ್ಷರು , ಅಂಗನವಾಡಿ , ದೇವದಾಸಿ , ಗ್ರಾಮ ಪಂಚಾಯತ ನೌಕರರ ಸಂಘದ ಸಂಸ್ಥಾಪಕರು,ಕಲ್ಯಾಣ ಕರ್ನಾಟಕ ಹೋರಾಟದ ಗಟ್ಟಿಗ, ಬಡವರ ದ್ವನಿ ಕಾಮ್ರೆಡ್ ಮಾರುತಿ ಮಾನಪಡೆಯವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ಸ್ವಗ್ರಾಮ ಅಂಬಲಗಿಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲು ಗ್ರಾಮದ ಹಿರಿಯರು ತೀರ್ಮಾನಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕ ಡಾ. ಶಿವರಂಜನ್ ಸತ್ಯಂಪೇಟೆ, ಶಾಸಕರಾದ ಶರಣು ಸಲಗರ, ಚಿಂತಕರಾದ ಬಿ. ವಿ. ಚಕ್ರವರ್ತಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶರಣಗೌಡ ಪಾಟೀಲ ಸಲಗರ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ಅಶೋಕ ಅಂಬಲಗಿ, ಪ್ರಗತಿಪರ ಬಾಬು ಹಿರಮಶೆಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಶಿವಶರಣಪ್ಪ ದನ್ನೂರ ,ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಬಸವರಾಜ ಸರಡಗಿ ,ಕುಪ್ಪಣ್ಣ ದಂಡೆ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಅಂಬಲಗಾ, ವಕೀಲರಾದ ಮಲ್ಲಿಕಾರ್ಜುನ ಕೊಳ್ಳುರೆ , ಅಂಬಲಗಾ , ಲಾಡ ಮುಗಳಿ ಗ್ರಾಮ ಪಂಚಾಯತಗಳ ಅಧ್ಯಕ್ಷರು ಸದಸ್ಯರ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here