ಸುರಪುರ ಪೊಲೀಸ್ ಉಪ ವಿಭಾಗ ಡಿವೈಎಸ್ಪಿಯಾಗಿ ಡಾ:ದೇವರಾಜ್ ಕರ್ತವ್ಯಕ್ಕೆ ಹಾಜರ್

0
14

ಸುರಪುರ: ಪೊಲೀಸ್ ಉಪ ವಿಭಾಗದ ಉಪ ಅಧೀಕ್ಷಕರಾಗಿ ಕಳೆದ ೨೧ ತಿಂಗಳುಗಳಿಂದ ಸೇವೆ ಸಲ್ಲಿಸಿ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿರುವ ವೆಂಕಟೇಶ ಉಗಿಬಂಡಿಯವರಿಂದ ತೆರವಾಗಿರುವ ಸ್ಥಾನಕ್ಕೆ ನೂತನ ಡಿವೈಎಸ್ಪಿಯಾಗಿ ಡಾ:ದೇವರಾಜ್ ಬಿ.ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಿರ್ಗಮಿತ ಡಿವೈಎಸ್ಪಿ ವೆಂಕಟೇಶ ಉಗಿಬಂಡಿಯವರಿಂದ ಅಧಿಕಾರ ಹಸ್ತಾಂತರಿಸಲಾಯಿತು. ಅಲ್ಲದೆ ನೂತನವಾಗಿ ಆಗಮಿಸಿರುವ ಡಾ:ದೇವರಾಜ್ ಬಿ.ಅವರಿಗೆ ವೆಂಕಟೇಶ ಉಗಿಬಂಡಿಯವರು ಶುಭಹಾರೈಸಿದರು ಹಾಗು ಠಾಣೆಯ ಎಲ್ಲಾ ಅಧಿಕಾರಿಗಳು ನೂತನ ಡಿವೈಎಸ್ಪಿಯವರಿಗೆ ಸನ್ಮಾನಿಸಿ ಸ್ವಾಗತಿಸಿದರು.ನಿರ್ಗಮಿತ ಡಿವೈಎಸ್ಪಿ ವೆಂಕಟೇಶ ಉಗಿಬಂಡಿಯವರಿಗೆ ಅನೇಕರು ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here