ಬಸ್ಸಿನ ಸೌಲಭ್ಯ ಕಲ್ಪಿಸಲು ಕುಮಾರಸ್ವಾಮಿ ಸೇನೆ ಪ್ರತಿಭಟನೆ

0
77

ಸುರಪುರ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಹಾಗು ನಿಲ್ದಾಣದಲ್ಲಿ ಸ್ವಚ್ಛತೆಗೊಳಿಸುವಂತೆ ಆಗ್ರಹಿಸಿ ಹೆಚ್.ಡಿ.ಕುಮಾರಸ್ವಾಮಿ ಸೇನೆಯಿಂದ ನಗರದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ತಾಲ್ಲೂಕಿನ ಬೊಮ್ಮನಹಳ್ಳಿ,ಮಲ್ಲಿಬಾವಿ, ರತ್ತಾಳ ಸೇರಿದಂತೆ ಅನೇಕ ಗ್ರಾಮಗಳಿಗೆ ಬಸ್ಸುಗಳಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರಲು ತೊಂದರೆಯಾಗಿದೆ. ಕೂಡಲೆ ಎಲ್ಲಾ ಗ್ರಾಮಗಳಿಗೆ ಬಸ್ಸು ಓಡಿಸಬೇಕು. ಅಲ್ಲದೆ ಕೆಂಭಾವಿ,ಬೈಚಬಾಳ ಮತ್ತಿತರೆ ಕಡೆಗಳಿಗೆ ರಾತ್ರಿ ಎಂಟು ಗಂಟೆಯಾದರೆ ಹೋಗಲು ಬಸ್ಸುಗಳಿಲ್ಲ.ವಸತಿ ಗಾಡಿಗಳು ಏಳು ಗಂಟೆಗೆ ಹೋದರೆ ರಾತ್ರಿ ಹೋಗುವವರ ಗತಿ ಏನು.

Contact Your\'s Advertisement; 9902492681

ಆದ್ದರಿಂದ ವಸತಿ ಬಸ್ಸುಗಳನ್ನು ಎಂಟು ಗಂಟೆ ನಂತರ ಓಡಿಸಬೇಕು.ಬಸ್ ನಿಲ್ದಾಣದಲ್ಲಿ ಶೌಚಾಲಯಗಳ ಸ್ವಚ್ಛತೆಯಿಲ್ಲ.ಬಸ್ ನಿಲ್ದಾಣದಲ್ಲಿ ದಿನ,ಹಂದಿಗಳ ತಾಣವಾಗಿದೆ.ಕೂಡಲೆ ಗಾರ್ಡ್‌ಗಳ ನೇಮಕ ಮಾಡಬೇಕು ಮತ್ತು ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ನಮ್ಮ ತಾಲ್ಲೂಕು ಡಿಪೋಗೆ ಹಳೆಯ ಬಸ್ಸುಗಳನ್ನು ನೀಡಲಾಗಿದೆ. ಇದರಿಂದ ನಿತ್ಯವು ಎಲ್ಲೆಂದರಲ್ಲಿ ಬಸ್ಸುಗಳು ಕೆಟ್ಟು ನಿಲ್ಲುತ್ತವೆ.

ಹೊಸ ಬಸ್ಸುಗಳ ನೀಡಬೇಕು ಹಾಗು ಶ್ರೀಶೈಲ ಮತ್ತು ತಿರುಪತಿಗೆ ಬಸ್ಸುಗಳ ಓಡಿಸುವಂತೆ ಒತ್ತಾಯಿಸಿ ಕಲಬುರ್ಗಿ ಸಾರಿಗೆ ಆಯುಕ್ತರಿಗೆ ಬರೆದ ಮನವಿಯನ್ನು ತಹಸಿಲ್ ಸಿರಸ್ತೆದಾರ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಸ್ತಾದ್ ವಜಾಹತ್ ಹುಸೇನ್, ಗೋಪಾಲ ಬಾಗಲಕೋಟಿ,ಮಾನಯ್ಯದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಸೇರಿದಂತೆ ಅನೇಕ ಶಾಲಾ ಮಕ್ಕಳುಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here