ಸುರಪುರ:ತಾಲೂಕು ಆಡಳಿತ ಕಿತ್ತೂರು ಚೆನ್ನಮ್ಮನ ಜಯಂತಿ ಆಚರಣೆ

0
6

ಸುರಪುರ: ನಗರದ ತಹಸೀಲ್ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಯನ್ನು ಆಚರಿಸಲಾಯಿತು.ಶನಿವಾರ ನಡೆದ ಕಾರ್ಯಕ್ರಮದ ಆರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮಾತನಾಡಿ,ಭಾರತದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರು ತಮ್ಮದೆ ಆದ ಇತಿಹಾಸವನ್ನು ನಿರ್ಮಿಸಿದ್ದಾರೆ.ಪತಿಯು ಇಲ್ಲವಾದರೂ ಎದೆಗುಂದದೆ ಬ್ರಿಟೀಷರ ವಿರುದ್ಧ ಸೆಟೆದು ನಿಂತು ಬ್ರಿಟೀಷರ ಎದೆ ನಡುಗಿಸಿದ್ದ ವೀರಮಹಿಳೆಯಾಗಿದ್ದಾಳೆ.

Contact Your\'s Advertisement; 9902492681

ದೇಶದ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಗಟ್ಟಿ ಮಹಿಳೆ ಚೆನ್ನಮ್ಮಳಾಗಿದ್ದು,ಇಂದಿಗೂ ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾಳೆ.ಇಂದಿಗೂ ಅನೇಕ ಬಾರಿ ಮಹಿಳೆಯರ ಬಗ್ಗೆ ಮಾತನಾಡುವಾಗ ಕಿತ್ತೂರು ಚೆನ್ನಮ್ಮನಂತಾಗಬೇಕೆಂದು ಅಭಿಮಾನದಿಂದ ಮಾತನಾಡುವುದನ್ನು ನೋಡುತ್ತೇವೆ.ಅಂತಹ ಧೀಮಂತ ಮಹಿಳೆಯ ಜಯಂತಿಯನ್ನು ಇನ್ನೂ ಅಧ್ಧೂರಿಯಾಗಿ ಆಚರಿಸಬೇಕಿತ್ತು.ಆದರೆ ರಾಜ್ಯದಲ್ಲಿ ಕೋವಿಡ್ ನಿಯಮಗಳು ಜಾರಿಯಲ್ಲಿರುವುದರಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲಣ್ಣ ಸಾಹು ಮುಧೋಳ,ಸೂಗುರೇಶ ವಾರದ್,ಜಯಲಲಿತಾ ಪಾಟೀಲ್,ಮಂಜುನಾಥ ಜಾಲಹಳ್ಳಿ,ವಿರೇಶ ದೇಶಮುಖ,ವಿರುಪಾಕ್ಷಿ ಕೋನ್ಹಾಳ,ಸೂಗುರೇಶ ಮಡ್ಡಿ,ಶರಣು ಕಳ್ಳಿಮನಿ,ಸಿದ್ದನಗೌಡ ಹೆಬ್ಬಾಳ,ಚಂದ್ರಶೇಖರ ಡೋಣೂರ,ಶಿವರಾಜ ಕಲಕೇರಿ,ಚನ್ನಬಸವ ವಾಲಿ,ಸೂಗು ಸಜ್ಜನ್ ಹಾಗು ತಹಸೀಲ್ ಸಿರಸ್ಥೆದಾರ ಕೊಂಡಲನಾಯಕ ಹಾಗು ಕಚೇರಿಯ ಎಲ್ಲಾ ಸಿಬ್ಬಂದಿಗಳು ಸೇರಿ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here