ಮಾನವ ಸಂಕೋಲೆ ಮಾಡಿ ಧನ್ಯವಾದ ಅರ್ಪಿಸಿದ ಬಿಜೆಪಿ ಕಾರ್ಯಕರ್ತರು

0
67

ಶಹಾಬಾದ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಶಹಾಬಾದ ಮಂಡಲ ವತಿಯಿಂದ ಶನಿವಾರದಂದು ಪಾರ್ವತಿ ಕಲ್ಯಾಣ ಮಂಟಪ ಆವರಣದಲ್ಲಿ 100 ಕೋಟಿ ಕರೋನ ವ್ಯಾಕ್ಸಿನೇಷನ್ ವಿತರಿಸಿದಕ್ಕಾಗಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ರವರಿಗೆ ಮತ್ತು ವ್ಯಾಕ್ಸಿನೇಷನ್ ಯೋಧರಿಗೆ ಧನ್ಯವಾದ ತಿಳಿಸಲು ಸಾಂಕೇತಿಕವಾಗಿ 100 ಸಂಖ್ಯೆಯಲ್ಲಿ ಮಾನವ ಸಂಕೋಲೆ ಮಾಡಿ ಧನ್ಯವಾದ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮೋರ್ಚ ಅಧ್ಯಕ್ಷರಾದ ದಿನೇಶ ಗೌಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಫಲವಾಗಿ 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು. ದೇಶದಾದ್ಯಂತ ಕೇವಲ 9 ತಿಂಗಳಲ್ಲಿ 100 ಕೊಟಿ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ.ಲಸಿಕೆಗೆ ಅವಿರತವಾಗಿ ದೇಶದ ವಿಜ್ಞಾನಿಗಳು, ವೈದ್ಯರು, ದಾದಿಯರು,ಆರೋಗ್ಯ ಸಿಬ್ಬಂದಿಯ ಶ್ರಮಿಸಿದ್ದಾರೆ ಅವರೆಲ್ಲರಿಗೂ ಜಿಲ್ಲಾ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

Contact Your\'s Advertisement; 9902492681

ಪ್ರಧಾನ ಕಾರ್ಯದರ್ಶಿ ರಾಕೇಶ ಮಿಶ್ರಾ , ಶರಣು ಕೌಲಗಿ,ಕಿರಣ ದಂಡಗುಲಕರ,ರೇವಣಸಿದ್ದ ಮತಿಮೂಡ,ಉಮೇಶ ನಿಂಬಾಳಕರ,ಪವನ ಜಾಧವ,ಆಶಿಷ ಮಂತ್ರಿ,ಶ್ರೀನಿವಾಸ ನೇದಲಗಿ,ಸಂಗಮೇಶ ಪಟ್ಟೆದ,ಅವಿನಾಶ ಸಾಳೂಂಕೆ,ರಾಘವೇಂದ್ರ, ಉದಯ,ರಮೇಶ,ಕಲ್ಯಾಣಿ, ಸತೀಶ,ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ,ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ,ಖಜಾಂಚಿ ಅಣ್ಣೆಪ್ಪ ದಸ್ತಾಪೂರ,ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಸಜ್ಜನ,ಕಾರ್ಯದರ್ಶಿ ಶರಣು ಕರಣಗಿ,ಪ್ರಮುಖರಾದ,ಭೀಮರಾವ ಸಾಳೂಂಕೆ, ಸುಭಾಷ ಜಾಪೂರ,ಡಾ.ಅಶೋಕ ಜಿಂಗಾಡೆ,ಬಸವರಾಜ ಬಿರಾದಾರ,ನಿಂಗಣ್ಣ ಹುಳಗೋಳಕರ,ಸೂರ್ಯಕಾಂತ ವಾರದ,ನಿಲಕಂಠ ಕೋಬಾಳ,ನಗರಸಭೆ ಸದಸ್ಯೆ ಪಾರ್ವತಿ ಪವರ,ರಾಜು ಕುಂಬಾರ,ಸಂಜಯ ವಿಟ್ಕರ,ಜಯಶ್ರೀ ಸೂಡಿ,ಆರತಿ ಸೂಡಿ, ಸುಕುಲತಾ, ಸುನಿತಾ,ಸುಜಾತ,ಸವಿತಾ,ಪಾರ್ವತಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here