ಪಂಢರಪೂರಕ್ಕೆ ವಿಶೇಷ ರೈಲಿಗೆ ಚಾಲನೆ

0
54

ಬೀದರ್: ಆಷಾಢ ಎಕಾದಶಿಯ ನಿಮಿತ್ಯ ಸಂಸದ ಭಗವಂತ್ ಖೂಬಾ ಅವರ ಪ್ರಯತ್ನದಿಂದ ನಗರದಿಂದ ಪಂಢರಾಪೂರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಸದರಿ ರೈಲಿನ ಚಾಲನಾ ಸಮಾರಂಭವನ್ನು ಗುರುವಾರ ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಡಿಆರ್‌ಯುಸಿಸಿ. ಸದಸ್ಯರಾದ ಮಲ್ಲಿಕಾರ್ಜುನ್ ಕುಂಬಾರ್ ಮತ್ತು ಪಕ್ಷದ ಮುಖಂಡರು ಸೇರಿ ರೈಲಿಗೆ ಪೂಜೆಯನ್ನು ಮಾಡಿ, ಪ್ರಯಾಣಿಸುತ್ತಿರುವ ಭಕ್ತರಿಗೆ ಕೇಸರಿ ಶಾಲು ಮತ್ತು ಟೋಪಿಗಳು ಹೊದಿಸಿ ಗೌರವಿಸಿ, ಪಂಡರಿನಾಥನ ದರುಶನಕ್ಕೆ ಕಳುಹಿಕೊಟ್ಟರು.

ಸಮಾರಂಭದಲ್ಲಿ ರಾಜ್ಯ ಕಾರ‍್ಯಕಾರಿಣಿ ಸದಸ್ಯರು ಮತ್ತು ರಾಜ್ಯ ಸ್ಲಂ ಮೊರ್ಚಾ ಉಪಾಧ್ಯಕ್ಷ ಬಾಬುವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ಬಾಬುರಾವ್ ಕಾರಬಾರಿ, ಮುಖಂಡರಾದ ಮಹೇಶ್ವರ್ ಸ್ವಾಮಿ, ರಾಜೆಂದ್ರ ಪೂಜಾರಿ, ರಾಮಣ್ಣಾ ದುಬಲಗುಂಡಿ, ಅನಿಲ್ ಪಸಾರಗಿ, ರವಿ ಹೊಸಳ್ಳಿ ಮತ್ತು ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here