ಚಿಂಚೋಳಿ: ನಟ ಪುನೀತ್ ರಾಜಕುಮಾರಗೆ ಭಾವಪೂರ್ಣ ಶ್ರದ್ಧಾಂಜಲಿ 

0
27

ಚಿಂಚೋಳಿ: ಅಕಾಲಿಕವಾಗಿ ನಿಧನರಾದ ಕನ್ನಡದ ಮೇರು ನಟ, ಯುವಕರ ಆಶಾಕಿರಣ ಸಾಮಾಜಿಕ ಕಳಕಳಿ ಹೊಂದಿದ್ದ,ಕೋರೊನಾ ಮಹಾಮಾರಿ ಸಂದರ್ಭದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ಆದರ್ಶ ವ್ಯಕ್ತಿತ್ವ ಹೊಂದಿದ್ದ ಅನೇಕ ಬಡಜನರಿಗೆ ಸಹಾಯ ಮಾಡಿರುವ, ವೃದ್ಧಾಶ್ರಮ,ಅನಾಥ ಆಶ್ರಮಗಳು, ಉಚಿತ ಶಾಲೆಗಳು,1800 ಮಕ್ಕಳ ಸಂಪೂರ್ಣ ಶಿಕ್ಷಣ,ಗೋ ಶಾಲೆಗಳನ್ನು ನಡೆಸುತ್ತಿದ್ದ ಕನ್ನಡಿಗರ ಮನೆ ಮಾತಾಗಿದ್ದ ನಟ ಪುನೀತ್ ರಾಜಕುಮಾರವರಿಗೆ ಅಭಿಮಾನಿ ಬಳಗದಿಂದ ಚಿಂಚೋಳಿ ಅವಳಿ ಪಟ್ಟಣದ ಚಂದಾಪುರನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಕೆ‌.ಎಂ.ಬಾರಿ,ಲಕ್ಷ್ಮಣ ಅವಂಟಿ, ಕಾಶಿನಾಥ್ ನಾಟೀಕಾರ,ರಾಜು ಪವಾರ್,ಸಂಜು ಪಾಟೀಲ್, ಅಮರ್ ಲೋಡ್ಡನೋರ್,ಚಂದ್ರಶೆಟ್ಟಿ ವಕೀಲರು, ಕಾಶೀನಾಥ್ ಪಾಟೀಲ್, ಪ್ರಕಾಶ್ ಗುತ್ತೇದಾರ್,ಭೀಮಯ್ಯ ಗುತ್ತೇದಾರ್, ಶ್ರೀನಿವಾಸ ಗುತ್ತೇದಾರ್,ಕಿರಣ್ ಮಡಿವಾಳ,ವಿವೇಕ ಪಾಟೀಲ್ ದೇಗುಲಮಡಿ, ಪ್ರಶಾಂತ್ ರಾಮಬಾಯಿ, ಪ್ರಶಾಂತ್ ಅಬಕಾರಿ,ಸಿದ್ದು ಗಡಿಕೇಶ್ವರ ಸೇರಿದಂತೆ ಅನೇಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here