ಮೂಲಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಎಐಎಮ್‌ಎಸ್‌ಎಸ್ ಪ್ರತಿಭಟನೆ

0
5

ಶಹಾಬಾದ:ನಗರಸಭೆಯ ವ್ಯಾಪ್ತಿಯ ಹನುಮಾನ ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ ಮುಖಾಂತರ ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಮಧ್ಯಭಾಗದಲ್ಲಿರುವ ಹನುಮಾನ ನಗರದ ಬಡಾವಣೆಯಲ್ಲಿ ಬೀದಿದೀಪಗಳ ಸಮಸ್ಯೆ, ಚರಂಡಿ ಸಮಸ್ಯೆ, ಶೌಚಾಲಯದ ಹಾಗೂ ರಸ್ತೆ ಸಮಸ್ಯೆಗಳು ಕಾಡುತ್ತಿವೆ.ಇಲ್ಲಿನ ಜನರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸದಿರುವುದರಿಂದ ಇಲ್ಲಿನ ಜನರು ಬಹಿರ್ದೆಸೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ನಡೆದಾಡಲು ರಸ್ತೆಯಿಲ್ಲ. ಚರಂಡಿಯೂ ನಿರ್ಮಿಸಿಲ್ಲ. ಬೀದಿ ದೀಪಗಳ ನಿರ್ವಹಣೆ ಹಾಗೂ ಕೊಳವೆ ಬಾವಿಯ ದುರಸ್ತಿ ಮಾಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ.ಆದ್ದರಿಂದ ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಬಗಹರಿಸುವ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಹಾದೇವಿ.ಜಿ.ಮಾನೆ, ಸರಿತಾ ಶರಣಪ್ಪ, ರಾಧಿಕಾ, ಶಿಲ್ಪಾ, ಮಹಾದೇವಿ ಅತನೂರ ಸೇರಿದಂತೆ ಬಡಾವಣೆಯ ಅನೇಕ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here