ಸರಕಾರಿ ಯೋಜನೆಗಳ ಸದುಪಯೋಗಪಡಿಸಿಕೊಳ್ಳುತ್ತಿರುವ ಕ್ರೀಯಾಶೀಲ ನಗರಸಭೆ ಸದಸ್ಯಗೆ ಸನ್ಮಾನ

0
37

ಕಲಬುರಗಿ : ಸರಕಾರದ ಸಿ.ಡಿ.ಸಿ.ಯೋಜನೆಯಡಿ ಬರುವ ಜನಪರ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಕಾಲಮಿತಿಯಲ್ಲಿ ಅದರ ಸದುಪಯೋಗಪಡಿಸಿಕೊಂಡು ಜನರ ಉಪಯೋಗಕ್ಕೆ ತರುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ ಜಿಲ್ಲೆಯ ಚಿಟಗುಪ್ಪ ನಗರಸಭೆ ಸದಸ್ಯರಾದ ಕ್ರಿಸ್ತಾನಂದ ರವರ ಕ್ರಿಯಾಶೀಲತೆಯನ್ನು ಪರಿಗಣಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಸನ್ಮಾನ ಮಾಡಲಾಯಿತು.

ಅತಿ ಕಿರಿಯ ವಯಸ್ಸಿನ, ನಗರಸಭೆ ಸದಸ್ಯರಾದ ಕ್ರಿಸ್ತಾನಂದರವರು ಸರಕಾರದ ಯೋಜನೆಗಳು ಕಾಲಮಿತಿಯಲ್ಲಿ ಬಳಸಿಕೊಂಡು ಜನಪ್ರೀಯ ಯುವ ನಗರಸಭೆ ಸದಸ್ಯರಾಗಿದ್ದಾರೆ ಇವರ ಈ ರಚನಾತ್ಮಕ ಕಾರ್ಯವನ್ನು ಮೆಚ್ಚಿ, ಸಮಿತಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕ್ರಿಸ್ತಾನಂದರವರು ತಾವು ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಅಭಿಯಾನದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವುದಾಗಿ ಶಪಥ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ, ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶಾಮರಾವ ಪ್ಯಾಟಿ ಸಮಿತಿಯ ಮುಖಂಡರಾದ ಜ್ಞಾನಮಿತ್ರ ಸ್ಯಾಮ್ಯೂವೆಲ್, ಸುನಿಲ್ ಕುಲಕರ್ಣಿ,  ಶಿವಾನಂದ, ರವೀಂದ್ರಕುಮಾರ ಸೇರಿದಂತೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here