ಬೋನಾಳ ಗ್ರಾಮಕ್ಕೆ ಬಸ್ ಬಿಡಲು ಡಿಪೋ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

0
12

ಸುರಪುರ: ತಾಲೂಕಿನ ಬೋನಾಳ ಗ್ರಾಮಕ್ಕೆ ಬಸ್ ಆರಂಭಿಸಲು ಆಗ್ರಹಿಸಿ ನಗರದ ಬಸ್ ಡಿಪೋ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು,ನಮ್ಮ ಬೋನಾಳ ಗ್ರಾಮಕ್ಕೆ ಬರಬೇಕಿದ್ದ ಬಸ್‍ನ್ನು ಬೇರೆ ಗ್ರಾಮಗಳಿಗೆ ಓಡಿಸುವ ಮೂಲಕ ನಮ್ಮ ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಆಗಂದತಾಗಿದೆ.ಅಲ್ಲದೆ ಜನರು ಸುರಪುರಕ್ಕೆ ಬರಲು ತೊಂದರೆಪಡುವಂತಾಗಿದೆ.ಆದ್ದರಿಂದ ಕೂಡಲೇ ನಮ್ಮ ಗ್ರಾಮಕ್ಕೆ ಬಸ್‍ಗಳನ್ನು ಆರಂಭಿಸಲು ಒತ್ತಾಯಿಸಿದರು.

Contact Your\'s Advertisement; 9902492681

ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಡಿಪೋ ಅಧಿಕಾರಿಗಳು ತಿಳಿಸಿದರು ಒಪ್ಪದ ವಿದ್ಯಾರ್ಥಿಗಳು ಮಂಗಿಹಾಳ ಗ್ರಾಮಕ್ಕೆ ಹೋಗುವ ಬಸ್‍ನ್ನು ನಮ್ಮ ಗ್ರಾಮದ ಮೂಲಕ ಓಡಿಸುವಂತೆ ಒತ್ತಾಯಿಸಿದರು.ಇದರ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮರೆಪ್ಪ ಚಾಕ್ರಿ,ಬಸವರಾಜ ನಾಟೇಕಾರ್,ಹಂಪಯ್ಯ ಸ್ವಾಮಿ,ತಿಪ್ಪಣ್ಣ ಚಾಕ್ರಿ,ಮುತ್ತುರಾಜ ನಾಟೇಕಾರ್,ಶಿವು ಹುಲಿಮನಿ,ಬಸವರಾಜ ನಡವಿನಕೇರಿ,ಮಾನಪ್ಪ ಹುಲಿಮನಿ,ಚನ್ನಪ್ಪ ಹುಲಿಮನಿ,ಅಂಬ್ರೇಶ ಗುತ್ತೇದಾರ ಸೇರಿದಂತೆ ಅನೇಕ ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here