ತ್ರಿಪುರಾ ಘಟನೆ ಖಂಡಿಸಿ ಪ್ರತಿಭಟನೆ

0
82

ಶಹಾಬಾದ : ತ್ರಿಪುರಾ ರಾಜ್ಯದಲ್ಲಿ ಅಮಾಯಕರ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವೆಸಗಿರುವುದನ್ನು ಖಂಡಿಸಿ ಶುಕ್ರವಾರ ನಗರದ ಸಿಟಿಜೆನ್ ಕ್ಲಬ್ ಶಹಾಬಾದ ವತಿಯಿಂದ ನಗರದ ಅಂಬೇಡ್ಕರ್ ಪ್ರತಿಮೆಯ ಬಳಿ ಸೇರಿಕೊಂಡು ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಆಡಳಿತದ ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ.ಇದಕ್ಕೆ ತ್ರಿಪುರಾ ಘಟನೆಯೇ ಸಾಕ್ಷಿ.ಕೇಂದ್ರದ ವೈಫಲ್ಯಗಳನ್ನು ಮುಚ್ಚುಕೊಳ್ಳುವುದಕ್ಕೆ ಬಿಜೆಪಿ ಸರಕಾರ ಜನರ ಗಮನ ಬೇರೆಡೆ ಸೆಳೆಯುವುದಕ್ಕೆ ದೇಶದಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ.

Contact Your\'s Advertisement; 9902492681

ಬಿಜೆಪಿ ಸರ್ಕಾರದ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ. ತ್ರಪುರಾದಲ್ಲಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆದಿವೆ.ಮಹಿಳೆಯರ ಮೇಲೆ ಹಲ್ಲೆಗಳಾಗಿವೆ.ಕೂಡಲೇ ಹಲ್ಲೆ ಹಾಘೂ ದಾಳಿಗೆ ಕಾರಣರಾದವರನ್ನು ವಿರುದ್ಧ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಅಲ್ಲದೇ ದೌರ್ಜನಕ್ಕೆ ಒಳಗಾದ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾದ ಕುಟುಂಬಗಳಿಗೆ ಅಲ್ಲಿನ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಂತರ ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಟಿಜೆನ್ ಕ್ಲಬ್ ಶಹಾಬಾದ ಅಧ್ಯಕ್ಷ ಯಾಸಿನ್ ಹುಸೇನ ಚಿಟ್,ಜಮೀರ್ ಬೇಗ, ಮಹ್ಮದ್ ಅಜರ್,ಡಾ.ರಶೀದ್ ಮರ್ಚಂಟ, ಉಬೆದುಲ್ಲಾ,ಹಾಷಮ ಖಾನ, ಫಜಲ್ ಪಟೇಲ್,ಜಾಕೀರ ಹುಸೇನ್, ಮುಜೀಬ, ಮುಜಾಹಿದ್ದಿನ್ ಹುಸೇನ್,ರಫಿಕ ಭಾಗಬಾನ, ರಹೀಂಖಾನ ಮದನಿ,ಅಕ್ಬರ್ ಚಿಟ್,ಡಾ.ಅಹ್ಮದ್ ಪಟೇಲ್, ಜಹೀರ ಪಟವೇಗರ್, ಮಹ್ಮದ್ ಇಮ್ರಾನ್, ಮಹ್ಮದ್ ಮುಬೀನ್, ಮಹ್ಮದ್ ಜಾವೀದ್,ನಜೀಬಖಾನ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here