ಬಸವೇಶ್ವರ ಮಹಾವಿದ್ಯಾಲಯದಲ್ಲಿ ದೇಶ ಭಕ್ತಿ ರಾಷ್ಟ್ರ ನಿರ್ಮಾಣ ಭಾಷಣ ಸ್ಪರ್ಧೆ

0
6

ಸುರಪುರ: ವಿದ್ಯಾರ್ಥಿಗಳು ದೇಶ, ದೇಶಾಭಿಮಾನದ ಜೊತೆಗೆ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ನೆಹರು ಯುವ ಕೇಂದ್ರದ ಸಂಯೊಜಕ ಸಂಜಯ ದೇವದುರ್ಗ ಹೇಳಿದರು.

ನೆಹರು ಯುವ ಕೇಂದ್ರ ಕಲಬುರಗಿ ವತಿಯಿಂದ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಭಾಷಣ ಸ್ಪರ್ದೆಯಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿ, ರಾಷ್ಟ್ರ ಅಭಿಮಾನ, ರಾಷ್ಟ್ರ ಪ್ರೇಮ ಇವುಗಳ ಬಗ್ಗೆ ಹೆಚ್ಚು ಮಹತ್ವ ವಹಿಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ, ಪ್ರಮುಖರಾದ ಮಲ್ಲು ಬಾದ್ಯಾಪುರ, ರುದ್ರಪ್ಪ ಕೆಂಭಾವಿ ಬಲಭೀಮ ಪಾಟಿಲ್ ಸೇರಿದಂತೆ ಇತರರಿದ್ದರು. ಭಾಷಣ ಸ್ಪರ್ದೆಯಲ್ಲಿ ಸಲೀಂ ಪಾಷಾ, ಸುನೀತಾ ರತ್ತಾಳ, ವಿಶಾಲಾಕ್ಷಿ, ಜೈಭೀಮ, ಬಸನಗೌಡ, ಬೀರಲಿಂಗ, ಸಂತೋಷ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here