ಸುರಪುರ: ಬೈಕ್ ಕಳ್ಳನ ಬಂಧನ ಎರಡು ಬೈಕ್‌ಗಳು ವಶಕ್ಕೆ

0
5

ಸುರಪುರ: ಕಳೆದ ಕೆಲ ದಿನಗಳ ಹಿಂದೆ ನಗರದ ಬಸ್ ನಿಲ್ದಾಣದ ಬಳಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಕಳ್ಳನನ್ನು ಬಂಧಿಸಿ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಕುಂಬಾರಪೇಟದ ಕುರುಬರಗಲ್ಲಿಯ ನಿವಾಸಿ ಉತ್ತಪ್ಪ ರಂಗಂಪೇಠ ಎಂಬುವವರು ಬಸ್ ನಿಲ್ದಾಣದ ಬಳಿಯ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು.

Contact Your\'s Advertisement; 9902492681

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿವೈಎಸ್ಪಿ ಡಾ: ದೇವರಾಜ ಬಿ. ಅವರ ಮಾರ್ಗದರ್ಶನದಲ್ಲಿ ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಸುನಿಲಕುಮಾರ್ ಮೂಲಿಮನಿಯವರ ನೇತೃತ್ವದಲ್ಲಿ ಪಿಎಸ್‌ಐ ಕೃಷ್ಣಾ ಸುಬೇದಾರ, ಮನೋಹರ ರಾಠೋಡ ಹೆಚ್.ಸಿ ೧೦೫,ಬಸವರಾಜ ಸಿ.ಪಿ.ಸಿ ೧೮೦,ಹುಸೇನ ಸಿ.ಪಿ.ಸಿ ೨೩೬,ಸಿದ್ರಾಮರಡ್ಡಿ ಸಿ.ಪಿ.ಸಿ ೪೨೩ ಇವರುಗಳ ತಂಡ ರಂಜಿತ ಮಾನೆ ಎಂಬುವ ಆರೋಪಿತನನ್ನು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬೋಸ್ಗಾ ಗ್ರಾಮದಿಂದ ಪತ್ತೆ ಮಾಡಿ ಆರೋಪಿಯಿಂದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ:ಸಿ.ಬಿ ವೇದಮೂರ್ತಿಯವರು ತಿಳಿಸಿದ್ದು, ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನವನ್ನು ಘೋಷಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here