ಆಲ್ದಾಳ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 16 ಕುರಿಮರಿಗಳ ಬಲಿ

0
16

ಸುರಪುರ: ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಕುರಿದೊಡ್ಡಿಯಲ್ಲಿದ್ದ ಕುರಿಮರಿಗಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿದ್ದರಿಂದ ಕುರಿಮರಿಗಳು ಬಲಿಯಾಗಿರುವ ಘಟನೆ ಮಂಗಳವಾರ ಮದ್ಹ್ಯಾನ ನಡೆದಿದೆ.

ಆಲ್ದಾಳ ಗ್ರಾಮದ ದುರಗಪ್ಪ ಬಂಡೆಪ್ಪ ಕೊಜ್ಜಾಪುರ ಎಂಬುವವರಿಗೆ ಸೇರಿದ ೧೨ ಕುರಿ ಮರಿಗಳು ಗ್ರಾಮದ ಹೊರವಲಯದಲ್ಲಿನ ಜಮೀನಲ್ಲಿ ಕುರಿದೊಡ್ಡಿಯಲ್ಲಿ ಹಾಕಲಾಗಿದೆ.ಮದ್ಹ್ಯಾನದ ವೇಳೆಗೆ ಯಾರು ಇಲ್ಲದ್ದನ್ನು ಗಮನಿಸಿದ ಬೀದಿ ನಾಯಿಗಳ ಹಿಂಡು ಕುರಿದೊಡ್ಡಿಯ ಮೇಲೆ ದಾಳಿ ಮಾಡಿ ದೊಡ್ಡಿಯಲ್ಲಿದ್ದ ೧೨ ಮರಿಗಳನ್ನು ಕೊಂದು ಹಾಕಿವೆ.ಇದರಿಂದಾಗಿ ಕುರಿ ಮಾಲೀಕ ದುರಗಪ್ಪ ಕಣ್ಣೀರು ಸುರಿಸುತ್ತಿದ್ದಾರೆ.

Contact Your\'s Advertisement; 9902492681

ಘಟನೆ ಕುರಿತು ಗ್ರಾಮದ ಮುಖಂಡ ರಮೇಶ ದೊರೆ ಆಲ್ದಾಳ ಮಾತನಾಡಿ,ಸಾಲ ಮಾಡಿ ಕುರಿ ಸಾಕಾಣಿಕೆ ಮಾಡಿರುವ ಬಡಪಾಯಿ ದುರುಗಪ್ಪನಿಗೆ ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗಿದ್ದು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನೆರವಾಗಿ ಕುರಿಗಳ ಸಾವಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here