ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿಗೆ ನಿವೃತ್ತ ಎಸ್ಪಿ ಸಿ.ಎನ್ ಭಂಡಾರೆ ಸನ್ಮಾನ

0
18

ಸುರಪುರ: ಕನ್ನಡ ಸಾಹಿತ್ಯ ಪರಿಷತ್‌ಗೆ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಹೇಶ ಜೋಷಿಯವರಿಗೆ ತಾಲೂಕಿನ ರುಕ್ಮಾಪುರ ಗ್ರಾಮದ ಮುಖಂಡರು ಹಾಗು ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆಯವರ ನೇತೃತ್ವದ ನಿಯೋಗದಿಂದ ಸನ್ಮಾನಿಸಿ ಗೌರವಿಸಿದ್ದಾರೆ.

ಬೆಂಗಳೂರಿನ ಕಸಾಪ ಕೇಂದ್ರ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಭೇಟಿ ಮಾಡಿದ ಚಂದ್ರಕಾಂತ ಭಂಡಾರೆಯವರು ಮಹೇಶ ಜೋಷಿಯವರಿಗೆ ಸನ್ಮಾನಿಸಿ ಗೌರವಿಸಿ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಗೆ ಮತ್ತು ಚಿಂತಕರಿಗೆ,ಕಲಾವಿದರಿಗೆ ಪರಿಷತ್‌ನ ರಾಜ್ಯ ಮಟ್ಟದ ಸಮಿತಿಗಳಲ್ಲಿ ಪ್ರಾಶಸ್ತ್ಯ ನೀಡುವಂತೆ ಲಿಖಿತ ಮನವಿಯನ್ನು ಸಲ್ಲಿಸಿದರು.

Contact Your\'s Advertisement; 9902492681

ನಂತರ ರುಕ್ಮಾಪುರದ ಸಾಹಿತಿ ರಂಗನಗೌಡ ಪಾಟೀಲ್ ಅವರು ಬರೆದ ಸುರಪುರ ಒಂದು ಪ್ರಾಚೀನ ಬೇಡರ ರಾಜ್ಯ ಮತ್ತು ಡಾ:ಹನುಮಾಕ್ಷಿ ಗೋಗಿಯವರು ಬರೆದ ಏವೂರು ಶಾಸನಗಳು ಸಾಂಸ್ಕೃತಿಕ ಅಧ್ಯಯನ ಮತ್ತು ಜಿನಸಮಯ ಹಾಗು ಸಾಹಿತಿ ಎಸ್.ಕೆ.ಅರುಣಿಯವರು ಬರೆದ ಮಧ್ಯಕಾಲಿನ ಕಲಬುರಗಿ ಕೃತಿಗಳನ್ನು ನೀಡಿ ಅಭಿನಂಧಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಎಸ್.ಕೆ ಅರುಣಿ ಮತ್ತು ಡಾ:ಹನುಮಾಕ್ಷಿ ಗೋಗಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here