ವಚನ ಸಂಗೀತೋತ್ಸವ ಕಾರ್ಯಕ್ರಮ ಯಶಸ್ವಿ

0
29

ಬೆಂಗಳೂರು: ವಿನಾಯಕ ಬಡಾವಣೆ ಶೆಟ್ಟಿಹಳ್ಳಿ ವಾರ್ಡ ಬೆಂಗಳೂರಿನಲ್ಲಿ ಬಸವ ಆಸರೆ ವೇದಿಕೆಯಲ್ಲಿ ನಾಡಿನ ಹೆಸರಾಂತ ಸಂಗೀತ ಗಾಯಕರಿಂದ ವಿಶೇಷ ವಚನ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.

ವಚನ ಸಂಗೀತ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ , ಪಂಡಿತ ಡಾ. ಮುದ್ದುಮೋಹನ ಐಎಎಸ್, ಶ್ರೀಮತಿ ಸಂಗೀತಾ ಕಟ್ಟಿ, ಬಾಬುರಾವ ಕೋಬಾಳ್, ಆಕಾಶವಾಣಿ ಕಲಾವಿದರಾದ ರವೀಂದ್ರ ಸೊರಗಾವಿ, ಕುಮಾರ್ ಕಣವಿ, ಮಾಲಾಶ್ರೀ ಕಣವಿ, ರಾಜು ಎಮ್ಮಿಗನೂರು, ಪಂಪಾಪತಿ ಗಡ್ಡಿ, ಸಿದ್ರಾಮ ಕೇಸಾಪುರ್, ಶಿವಲಿಂಗ ರಾಜಾಪುರ್ ಅರುಣ ಗಡ್ಡಿ, ಪುಣೇಶ್, ಕಾರ್ತಿಕ್, ಪಿನಾಕ ಪಾಣೆ, ಜಲೀಲ್ ಪಾಶಾ, ಕೇದಾರನಾಥ್ ಹೂಗಾರ್, ಪಂಚಾಕ್ಷರ ಕಣವಿ, ಸೇರಿದಂತೆ ಅನೇಕ ಹಿರಿಯ ಕಿರಿಯ ಸಂಗೀತಗಾರರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ, ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಮುದುಗಲ್ ಸಾನ್ನಿಧ್ಯವಹಿಸಿದ್ದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ, ಬಲವಂತರಾವ್ ಪಾಟೀಲ್, ಶ್ರೀಮತಿ ಶೀಲಾ ಪಾಟೀಲ್ ಸೇರಿದಂತೆ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here