ಪೇಠ ಅಮ್ಮಾಪುರ ರಸ್ತೆ ನಿರ್ಮಾಣಕ್ಕೆ ಡಿಎಸ್‌ಎಸ್ ಸಂಘಟನೆಸ ಒತ್ತಾಯ

0
11

ಸುರಪುರ: ಕುಂಬಾರಪೇಟೆಯಿಂದ ಪೇಠ ಅಮ್ಮಾಪುರಕ್ಕೆ ಹೋಗುವ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ನಿರ್ಲಕ್ಷ್ಯಕ್ಕೊಳಗಾಗಿದ್ದು ಇದರಿಂದಾಗಿ ಸುಮಾರು ೧೦ ಕಿಲೋ ಮೀಟರ್ ರಸ್ತೆ ತುಂಬಾ ತಗ್ಗು ಗುಂಡಿಗಳಿಂದ ತುಂಬಿದೆ,ನಿತ್ಯವು ವಾಹನ ಸವಾರರು ಪರದಾಡುವಂತಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಮಾತನಾಡಿ,ಕುಂಬಾರಪೇಟೆಯಿಂದ ಹೆಗ್ಗಣದೊಡ್ಡಿ ಕೂಡಲಗಿ ಮಾರ್ಗವಾಗಿ ಕೆಂಭಾವಿ ಮೂಲಕ ಸಿಂದಗಿ ವಿಜಯಪುರ ಹೋಗಲು ಈ ರಸ್ತೆ ಮುಖ್ಯವಾಗಿದೆ.ಅಲ್ಲದೆ ಇದೇ ರಸ್ತೆಯ ಮೂಲಕ ಬಾಗಲಕೋಟೆಗೆ ಬಸ್ ಓಡಾಡುತ್ತೆವೆ ಅಲ್ಲದೆ ಕನ್ನಳ್ಳಿ ಬೈಚಬಾಳ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಈ ರಸ್ತೆಯ ಮೂಲಕ ವಾಹನಗಳು ಓಡಾಡುತ್ತವೆ.

ಆದರೆ ಈಗ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.ನಿತ್ಯವು ಬಸ್‌ಗಳ ಓಡಾಟಕ್ಕೆ ತೊಂದರೆಯಾಗುತ್ತಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸಮಯ ಮೀರುವುದರಿಂದ ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಕೂಡಲೇ ಲೊಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಯ ಬದಲಾಗಿ ಹೊಸದಾಗಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ನಮ್ಮ ಸಂಘಟನೆಯಿಂದ ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ ಹಾಗು ಸಂಘಟನಾ ಸಂಚಾಲಕರಾದ ಶಿವಲಿಂಗ ಹಸನಾಪುರ ಅವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here