ಚಿತ್ತಾಪುರ: ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಹಣ 25 ಸಾವಿರಕ್ಕೆ ಏರಿಕೆ ಮಾಡಿದ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಬಳೂಂಡಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸರ್ಕಾರಿ ನೌಕರರಿಗೆ ಹಬ್ಬಗಳ ಆಚರಣೆಗೆ ಈ ಮೊದಲು ಬಡ್ಡಿ ರಹಿತ 10 ಸಾವಿರ ಮುಂಗಡ ಹಣ ನೀಡಲಾಗುತ್ತಿತ್ತು ಆದರೆ ನಮ್ಮ ರಾಜ್ಯ ಅಧ್ಯಕ್ಷರು ಇದನ್ನು ಹೆಚ್ಚಳ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.ಅವರ ಮನವಿಗೆ ಸ್ಪಂದಿಸಿ ಮುಂಗಡ ಹಣವನ್ನು 25 ಸಾವಿರಕ್ಕೆ ಹೆಚ್ಚಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರು ಆದೇಶ ಹೊರಡಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರಿಗೂ ತಾಲೂಕ ಘಟಕ ಪರವಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದು ಪ್ರಕಟಣೆ ನೀಡಿದ್ದಾರೆ.