ಎಂ.ಇ.ಎಸ್.ಮತ್ತು ಶಿವಸೇನಾ ಸಂಘಟನೆ ಗುಂಡಾಗಳ ಮೇಲೆ ಕ್ರಮ ಜರುಗಿಸಿ

0
23

ಕಲಬುರಗಿ: ಮಹಾರಾಷ್ಟ್ರ, ದ ಕೋಲಾಪುರದಲ್ಲಿ ಕನ್ನಡ ದ್ವಜವನು ಸುಟ್ಟು ಹಾಕಿದ ಎಂ.ಇ.ಎಸ್.ಹಾಗೂ ಶಿವಸೇನಾ ಸಂಘಟನೆಯ ಗುಂಡಾಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನಾ೯ಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪುನೀತ್ ರಾಜ ಕವಡೆ ಆಗ್ರಹಿಸಿದರು.

ಅವರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ, ಕನ್ನಡ ದ್ವಜವನ್ನು ಸುಟ್ಟು ಹಾಕಿರುವುದು ಖಂಡನೀಯ ವಿಷಯವಾಗಿದೆ, ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಬೆಳಗಾವಿ ಜಿಲ್ಲೆಯಿಂದ ಎಂ.ಇ.ಎಸ್.ಹಾಗೂ ಶಿವಸೇನಾ ಸಂಘಟನೆಗಳನ್ನು ಸಂಪೂರ್ಣ ವಾಗಿ ನಿಷೇಧ ಮಾಡಬೇಕು. ಕನಾ೯ಟಕ ಯಾವುದೇ ಭಾಗದಲ್ಲಿ ಇನ್ನೂ ಮುಂದೆ ಎಂ.ಇ.ಎಸ.ಹಾಗೂ ಶಿವಸೇನಾ ದ್ವಜ ಹಾರಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹೇಶ್ ಕಾಶಿ, ಅಶೋಕ್ ಬಿನಳ್ಳಿ,ಶರಣಗೌಡ ಪಾಟೀಲ್, ಸಂತೋಷ ಖಣದಾಳ, ಸಿದ್ದಣಗೌಡ ಪಾಟೀಲ್, ಕಲ್ಯಾಣಿ ತಳವಾರ, ಮಂಜುಳಾ ರಾಠೋಡ, ಪೃಥ್ವಿ ರಾಜ ರಾಂಪುರ, ಶ್ರೀಶೈಲ ಕಣ್ಣೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here