ಕರ್ನಾಟಕ ದಲಿತಸೇನೆ ಅಂಗವಿಕಲ ರಾಜ್ಯಾಧ್ಯಕ್ಷ ನಾವದಗಿ ನೇಮಕ

0
14

ಆಳಂದ: ಕರ್ನಾಟಕ ದಲಿತ ಸೇನೆಯ ರಾಜ್ಯ ಘಟಕದ ಅಂಗವಿಕಲ ಒಕ್ಕೂಟದ ಅಧ್ಯಕ್ಷರಾಗಿ ತಾಲೂಕಿನ ಎಲೆನಾವದಗಿ ಗ್ರಾಮದ ಸಿದ್ಧು ನಾವದಗಿ ಅವರು ನೇಮಕಗೊಂಡಿದ್ದಾರೆ.

ಪಟ್ಟಣದ ಬುದ್ಧ, ಬಸವ, ಡಾ| ಅಂಬೇಡ್ಕರ್ ಭವನದಲ್ಲಿ ಗುರುವಾರ ಕರೆದ ಸೇನೆಯ ಕಾರ್ಯಕಾರಿ ಸಮತಿಯ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಾಬುರಾವ್ ಅರುಣೋದಯ ಪದಾಧಿಕಾರಿಗಳ ನೇಮಕಾತಿ ಪ್ರಕಟಿಸಿದರು.

Contact Your\'s Advertisement; 9902492681

ಅಲ್ಲದೆ, ಅಂಗವಿಕಲ ಘಟಕದ ಪದಾಧಿಕಾರಿಗಳನ್ನು ಪ್ರಕಟಿಸಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ವಹಿಸಿಕೊಟ್ಟು ಅಂಗವಿಕಲ ಕಲ್ಯಾಣ ಕಾರ್ಯಗಳಿಗೆ ಶ್ರಮಿಸುವಂತೆ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀಶೈಲ ಚಲಗೇರಿ, ಜಮಾಲ್ ಮಕಾಂದಾರ, ಶಿವುಪುತ್ರ ತೆಲಾಕುಣ ಸೇರಿ ಕಾರ್ಯಕಾರಣಿ ಸದಸ್ಯ ಮಲ್ಲಿನಾಥ ನಿಂಬಾಳ, ಶಿವುಕುಮಾರ ಉಳ್ಳೆ, ಕರಬಸಪ್ಪ ಖಜೂರಿ, ಅಂಬಾದಾಸ ಲಿಂಗದಳಿ ಉಪಸ್ಥಿತರಿದ್ದರು.

ಇದೇ ವೇಳೆ ಅಂಗವಿಕಲ ಒಕ್ಕೂಟದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಿದ್ಧು ಎಲೆನಾವದಗಿ (ರಾಜ್ಯ ಅಧ್ಯಕ್ಷ), ಸದಾಶಿವ ಕುಮ್ಮೆ (ತಾಲೂಕು ಅಧ್ಯಕ್ಷ), ಶರಣಯ್ಯ ಹಿರೇಮಠ (ತಾ| ಉಪಾಧ್ಯಕ್ಷ), ಅವರನ್ನು ಆಯ್ಕೆ ಮಾಡಿ ಅಧಿಕಾರ ವಹಿಸಿಕೊಟ್ಟು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here