ಮಾವು ಹೂ ಎಳೆ ಕಾಯಿ ಹಂತ ಮ್ಯಾಂಗೊ ಸ್ಪೇಷಲ್ ಸಿಂಪಡಣೆ

0
8

ಕಲಬುರಗಿ: ಉತ್ತಮ ಮಾವು ಫಸಲಿಗೆ ಬೆಳೆಯ ವಿವಿಧ ಹಂತಗಳಲ್ಲಿ ಸೂಕ್ತ ನಿರ್ವಹಣೆ ಮುಖ್ಯ. ಅದರಲ್ಲೂ ಮಾವು ಬೆಳೆಯ ಕೀಟ ರೋಗಗಳನ್ನು ಸೂಕ್ತ ಹಂತದಲ್ಲಿ ಗುರುತಿಸಿ ಅವುಗಳ ಸಮರ್ಪಕ ನಿರ್ವಹಣೆ ಮಾಡದಿದ್ದಲ್ಲಿ ಅಪಾರ ನಷ್ಟವಾಗುವುದು.ಮಾವು ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು.

ಏಕೆಂದರೆ, ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳು ಮತ್ತು ಎಳೆಯ ಕಚ್ಚಿದ ಕಾಯಿಗಳಿಗೆ ಹಾನಿಯನ್ನಂಟು ಮಾಡುತ್ತದೆ. ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ನೀರುಣಿಸಬಾರದು. ಪರಾಗ ಸ್ಪರ್ಶ ಪೂರ್ಣಗೊಂಡ ನಂತರ ಕಾಯಿಯು ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬಹುದು. ಎರಡು ಮತ್ತು ಮೂರು ರಕ್ಷಣಾತ್ಮಕ/ಪೂರಕ ನೀರಾವರಿ ಕೈಗೊಳ್ಳಬಹುದು. ಕಚ್ಚಿದ ಕಾಯಿಗಳು ಉದುರದಂತೆ ನೋಡಿಕೊಳ್ಳಲು ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆರವರು ಹೊರತಂದಿರುವ ಮ್ಯಾಂಗೊ ಸ್ಪೇಷಲ್ ವನ್ನು ಪ್ರತಿ ೧೦ ಲೀಟರ ನೀರಿನಲ್ಲಿ ೫೦ ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸುವುದು.

Contact Your\'s Advertisement; 9902492681

ಈ ಸಿಂಪರಣಾ ದ್ರಾವಣಕ್ಕೆ ಸೋಪು ದ್ರಾವಣವನ್ನು ೦.೫ ಮಿ.ಲೀ/ಲೀ. ಮತ್ತು ಅರ್ಧ ಹೋಳು ನಿಂಬೆ ರಸ ಬೆರೆಸಿ ಸಿಂಪಡಿಸಿದರೆ, ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು. ಪೊಟ್ಯಾಸಿಯಂ ನೈಟ್ರೇಟ ೧೩೦-೦-೪೫ ೨೦ ಗ್ರಾಂ/ಲೀ ಸಿಂಪಡಣೆಯನ್ನು ಕೈಗೊಳ್ಳುವುದರಿಂದ ಮೊಗ್ಗು ಅರಳಲು ಮತ್ತು ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ ವಾಸುದೇವ ನಾಯ್ಕ ಮತ್ತು ಜಹೀರ್ ಅಹ್ಮದ ಕ್ಷೇತ್ರಕ್ಕೆ ಭೇಟಿ ನೀಡಿದರು.

ಬೂದಿರೋಗ ರೋಗ ಹೂ ಹಾಗೂ ಕಾಯಿ ಬಿಡುವ ಹಂತದಲ್ಲಿ ಹೆಚ್ಚಾಗಿ ಕಂಡು ಬರುವ ಈ ರೋಗದ ತೀವ್ರತೆ ರಾತ್ರಿಯಲ್ಲಿ ಕಡಿಮೆ ತಾಪಮಾನ ಹಾಗೂ ಹಗಲಿನಲ್ಲಿ ಹೆಚ್ಚು ತಾಪಮಾನವಿರುವಂತಹ ಚಳಿಗಾಲದ ವಾತಾವರಣದಲ್ಲಿ ಹೆಚ್ಚುವದು. ಹೂ ಗೊಂಚಲುಗಳ ಮೇಲೆ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆಯಾಗಿ ನಂತರ ಸಣ್ಣ ಕಾಯಿ, ಎಲೆ ಹಾಗೂ ರೆಂಬೆಗಳ ಮೇಲೆ ಇದೆ ಲಕ್ಷಣಗಳು ಕಂಡು ಬಂದು, ರೋಗ ಪೀಡಿತ ಹೂಗಳ ಉದುರುವುದಲ್ಲದೆ, ಎಳೆಯ ಕಾಯಿಗಳು ಸಂಪೂರ್ಣವಾಗಿ ರೋಗದಿಂದ ಆವೃತವಾಗಿ ಉದುರುತ್ತ. ಶಿಲೀಂದ್ರನಾಶಕವಾದ ೧ ಮಿ.ಲೀ ಹೆಕ್ಸಾಕೋನೋಜೋಲ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಿರಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here