ಸಾಲಭಾದೆ: ಸತ್ಯಂಪೇಟೆ ಗ್ರಾಮದ ರೈತ ಮಲ್ಲಿಕಾರ್ನುನ ಆತ್ಮಹತ್ಯೆ

0
18

ಸುರಪುರ: ಸಾಲ ಭಾದೆಯಿಂದ ತಾಲೂಕಿನ ಸತ್ಯಂಪೇಟೆ ಗ್ರಾಮದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಡೆದಿದೆ.

೩ ಎಕರೆ ಜಮೀನು ಹೊಂದಿರುವ ರೈತ ಮಲ್ಲಿಕಾರ್ಜುನ ದೇವತ್ಕಲ್ ಎಂಬುವ ೪೨ ವರ್ಷದ ರೈತ ಖಾಸಗಿಯವರ ೨೦ನ ಎಕರೆದಷ್ಟು ಜಮೀನು ಲೀಜ್ ಪಡೆದುಕೊಂಡು ಭತ್ತ ವ್ಯವಸಾಯ ಮಾಡುತ್ತಿದ್ದ,ಆದರೆ ಕಳೆದ ಎರಡು ವರ್ಷದಿಂದ ಕೃಷಿಯಲ್ಲಿ ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದು ಇದರಿಂದು ಸುಮಾರು ೧೦ ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದಾನೆ.

Contact Your\'s Advertisement; 9902492681

ಸಾಲ ತೀರಿಸಲು ಸಾಧ್ಯವಾಗದ ತೊಂದರೆ ಒಂದಡೆಯಾದರೆ.ಕೃಷಿಯಲ್ಲಿ ನಷ್ಟ ಹೊಂದುತ್ತಿರುವುದು ಮತ್ತೊಂದು ಹೊರೆಯಾಗಿದ್ದು ಇದರಿಂದ ತೀವ್ರ ನೊಂದಿದ್ದ ರೈತ ಮಲ್ಲಿಕಾರ್ಜುನ ಗುರುವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರಿಗೆ ಮೃತ ರೈತನ ಪತ್ನಿ ಹೇಳಿಕೆ ದೂರು ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here