ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಕಚೇರಿಯ ಪ್ರಾಂಗಣದಲ್ಲಿ, ಡಿ ಹೆಚ್ ಓ. ಡಾ. ಶರಣಬಸಪ್ಪ ಗಣಜಲಖೇಡ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡುತ್ತಾ , ನಮ್ಮ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಸಂಧರ್ಭ ಎರಡನೇ ಅಲೆಯಿಂದ ಹಿಡಿದು ಮೂರನೇ ಅಲೆಯಲ್ಲಿ ಹೆಚ್ಚು ಹೆಚ್ಚು ಪಾಸಿಟಿವ್ ಕೇಸ್ ಬರುತ್ತಿದ್ದವೆ ಅಂತದರ ಮಧ್ಯೆ ವಿಶೇಷವಾಗಿ ನಮ್ಮ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹೆಚ್ಚು ಆರೋಗ್ಯದಲ್ಲಿ ತೊಂದರೆ ಇದ್ದರು ತಮ್ಮ ತಮ್ಮ ಕೆಲಸ ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ ಇಲಾಖೆಯ ಬೆಂಬಲದಿಂದ ಕರೋನ ಹೋಗಲಾಡಿಸಲು ಬದ್ಧರಾಗೋಣ, ಬಹಳ ಶ್ರದ್ಧೆ ಇಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬಹಳ ಹೆಮ್ಮೆ ಅಗುತ್ತದೆ ಕೆಲಸ ನಿರ್ವಹಿಸುತ್ತಿರುವುದು ಸಂತೋಷವಾಗುತ್ತದೆ ನನ್ನ ಇಲಾಖೆಯವತಿಯಿಂದ ಧನ್ಯವಾದಗಳು ತಿಳಿಸಿದರು.
ಆರೋಗ್ಯ ಇಲಾಖೆಯ ಪ್ರಮುಖರಾದ ಅರ್ ಸಿ ಹೆಚ್ ಓ. ಡಾ. ಪ್ರಭುಲಿಂಗ ಮಾನಕರ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಡಾ ಬಸವರಾಜ ಗುಳಗಿ, ಡಾ ರಾಜಕುಮಾರ ಕುಲ್ಕರ್ಣಿ , ಮಂಜುನಾಥ ಕಂಬಾಳಿಮಠ, ಚಂದ್ರಕಾಂತ ಏರಿ. ಶೌಖತ್ ಆಲಿ, ತಿಪ್ಪಮ್ಮ ಮಾನಕರ್, ಪಿ ಪಿ ನಾಯಕ್. ಗುಂಡಪ್ಪ ದೊಡ್ಡಮನಿ, ಶಶಿಧರ ಪಟ್ನಾಯಕ್ , ರಾಜಶೇಖರ ಕುರಕೋಟಿ, ನಿರೂಪಣೆ ಮತ್ತು ಸ್ವಾಗತವನ್ನು ಚಂದ್ರಕಾಂತ ಏರಿ ನಡೆಸಿಕೊಟ್ಟರು. ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.