ರಾಷ್ಟ್ರೀಯ ಶಿಕ್ಷಣ ನೀತಿ- ಕನ್ನಡ ಸಹಾಯಕ, ಸಹ ಪ್ರಾಧ್ಯಾಪಕರ ಶಿಬಿರ ನಾಳೆ

0
27

ಕಲಬುರಗಿ: ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ ವಿವಿ ಹಾಗೂ ಸಿದ್ಧಲಿಂಗೇಶ್ವರ ಬುಕ್ ಡಿಪೋ ಆಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಕನ್ನಡ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ಶಿಬಿರ ಕನ್ನಡ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ಶುಕ್ರವಾರ ಬೆಳಗ್ಗೆ 10. 30ಕ್ಕೆ ಆಯೋಜಿಸಲಾಗಿದೆ.

ಗುಲ್ಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.‌ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಕಾಶಕ ಬಸವರಾಜ ಕೊನೇಕ್ ಉಪಸ್ಥಿತರಿರುವರು.

Contact Your\'s Advertisement; 9902492681

ಮಧ್ಯಾಹ್ನ 12 ಗಂಟೆಗೆ ಹೊಸಗನ್ನಡ ಪಠ್ಯ ಪುಸ್ತಕ ಸಿದ್ಧತೆ- ಬೋಧನೆ ಕುರಿತು ಡಾ. ವಿಕ್ರಮ ವಿಸಾಜಿ, ಜಾನಪದ ಪಠ್ಯ ಪುಸ್ತಕ ಸಿದ್ಧತೆ-ಬೋಧನೆ ಕುರಿತು ಡಾ. ಶ್ರೀಶೈಲ ನಾಗರಾಳ, ಶಾಸ್ತ್ರ ಪಠ್ಯಪುಸ್ತಕ ಸಿದ್ಧತೆ- ಬೋಧನೆ ಕುರಿತು ಪ್ರೊ. ಕೆ. ರವೀಂದ್ರನಾಥ ಮಾತನಾಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here