ಮಾಜಿ ಕೇಂದ್ರ ಸಚಿವ ಖರ್ಗೆ ಜನ್ಮದಿನ ನಿಮಿತ್ತ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ

0
104

ಕಲಬುರಗಿ: ಕೇಂದ್ರದ ಮಾಜಿ ಸಚಿವ-ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ರೂವಾರಿ ಡಾ.ಮಲ್ಲಿಕಾರ್ಜುನ ಎಂ.ಖರ್ಗೆ ಜೀ ಯವರ ಎಪ್ಪತ್ತೇಳನೇ ವರ್ಷದ ಜನ್ಮದಿನದಂಗವಾಗಿ ಕಲಬುರಗಿಯಲ್ಲಿಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ನೇತೃತ್ವದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಸೀರೆಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆಯೋಜಿಸಲಾಯಿತು.

ಹಿರಿಯ ಪತ್ರಕರ್ತ ಡಿ.ಶಿವಲಿಂಗಪ್ಪ, ಜಿಪಂ ಮಾಜಿ ಸದಸ್ಯೆ-ನ್ಯಾಯವಾದಿ ಜ್ಯೋತಿಲಕ್ಷ್ಮೀ ಸಂಜುಶೆಟ್ಟಿ, ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ರಮಾ ಎಸ್.ಧರ್ಗಿ, ಸಾಮಾಜಿಕ ಚಿಂತಕ ಅಣವೀರಯ್ಯಾ ಸ್ವಾಮಿ, ರಶ್ಮಿ, ಬಿ.ಎಂ.ಪಾಟೀಲ ಕಲ್ಲೂರ, ಮಹಾಂತೇಶ ಕಲಬುರಗಿ, ಅಯ್ಯಣ್ಣಗೌಡ ಪಾಟೀಲ, ಪ್ರಸನ್ನ ವಾಂಜರಖೇಡೆ, ಸತೀಶ ಸಜ್ಜನ್, ಶರಣು ಅತನೂರ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here