ಡಾ:ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ಮಲ್ಲಿಕಾರ್ಜುನ ಕ್ರಾಂತಿಗೆ ನೀಡಲು ಪ್ರಗತಿಪರರ ಮನವಿ

0
33

ಸುರಪುರ: ಇದೇ ಏಪ್ರಿಲ್ ೧೪ ರಂದು ನಡೆಯುವ ಡಾ:ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ನೀಡಲಾಗುವ ಡಾ:ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಯನ್ನು ದಲಿತಪರ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿಗೆ ನೀಡುವಂತೆ ಪ್ರಗತಿಪರರು ಮನವಿ ಸಲ್ಲಿಸಿದರು.

ನಗರದ ತಹಸೀಲ್ ಕಚೇರಿಗೆ ತೆರಳಿ ಪ್ರಗತಿಪರ ಸಾಮೂಹಿಕ ಸಂಘಟನೆಗಳ ವೇದಿಕೆ ಅಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅನೇಕರು ಮಾತನಾಡಿ,ಕಳೆದ ಎರಡು ದಶಕಗಳಿಗು ಹೆಚ್ಚು ಕಾಲದಿಂದ ದೀನ ದಲಿತ ಶೋಷಿತರ ಪರವಾಗಿ ಹೋರಾಟ ಮಾಡುತ್ತಾ ಬರುತ್ತಿರುವ ಹಿರಿಯ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿಯವರು ಅಂಬೇಡ್ಕರ್‌ರ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಅವರ ಆದರ್ಶದಲ್ಲಿಯೇ ಹೋರಾಟವನ್ನು ಮಾಡುತ್ತಾ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.ಇಂತಹ ಹಿರಿಯ ಹೋರಾಟಗಾರನಿಗೆ ಈಬಾರಿಯ ಡಾ:ಬಿ.ಆರ್ ಅಂಬೇಡ್ಕ್ರರ್ ಪ್ರಶಸ್ತಿಯನ್ನು ನೀಡಬೇಕು,ಅಂದಾಗ ಪ್ರಶಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಲಿದೆ ಎಂದು ವಿನಂತಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ದೇವಿಂದ್ರಪ್ಪ ಪತ್ತಾರ,ಮಲ್ಲಯ್ಯ ಕಮತಗಿ,ಅಹ್ಮದ್ ಪಠಾಣ್,ನಿಂಗಣ್ಣ ಗೋನಾಲ,ಗೋಪಾಲ ಚಿನ್ನಾಕಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here