ಡಾ. ಅಂಬೇಡ್ಕರರು ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿ: ತಿಳಗೋಳ

0
6

ಕಲಬುರಗಿ: ವಿಶ್ವದ ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ ಅವರ ಕೊಡುಗೆ ಮತ್ತು ಸಮಾಜಿಕ ಕಳಕಳಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹಿರಿಯ ನ್ಯಾಯವಾದಿ ಗುರುರಾಜ ತಿಳಗೋಳ ಅವರು ಹೇಳಿದರು.

ನಗರದ ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೧ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ.ಅಂಬೇಡ್ಕರರು ಶ್ರೇಷ್ಠ ತತ್ವಜ್ಞಾನಿ. ಆದರ್ಶ ಮತ್ತು ಮಾದರಿ ನಾಯಕರಾಗಿದ್ದಾರೆ ಎಂದರು.

Contact Your\'s Advertisement; 9902492681

ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆಗೆ ಚಂದು ಪಾಟೀಲ ಪುಷ್ಪ ನಮನ

ನಿವೃತ್ತ ಪೊಲೀಸ ಅಧಿಕಾರಿ ವಿಠಲ ಸಗರ ಅವರು ಮಾತನಾಡಿ, ದೀನದಲಿತರು ಸೇರಿದಂತೆ ಎಲ್ಲ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ.ಅಂಬೇಡ್ಕರ ಅವರು ಲೋಕ ನಾಯಕರಾಗಿದ್ದಾರೆ. ಎಂದರು. ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂಯ೯ವಂಶಿ ಮಾತನಾಡಿ, ಶ್ರಮಿಕ ಶೋಷಿತ ವರ್ಗಗಳು ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಲು ಡಾ.ಅಂಬೇಡ್ಕರ ಅವರು, ಸಂವಿಧಾನ ಬದ್ಧವಾದ ಹಕ್ಕನ್ನು ನೀಡುವ ಮೂಲಕ ಸಮಾಜಿಕ ನ್ಯಾಯವನ್ನು ಕಲ್ಪಿಸಿದ ಜನನಾಯಕರು ಎಂದರು.

ನ್ಯಾಯವಾದಿ ಗುರುರಾಜ ತಿಳಗೋಳ, ನಿವೃತ್ತ ಪೋಲಿಸ ಅಧಿಕಾರಿ ವಿಠ್ಠಲ ಸಗರ, ಮಾಜಿ ಉಪ ಮೇಯರ ಬಾಬು ಸೋಂಟನೂರ, ವೆಂಕಟೇಶ ಕಾಂಬಳೆ, ಚಂದ್ರಹಾಸ ಚಿದ್ರಿ, ನಾಗರಾಜ ಸೋಲಾಪೂರಕರ, ರಾಘವೇಂದ್ರ ಕುಲಕರ್ಣಿ, ಲಕ್ಷ್ಮೀ, ರಾಮಚಂದ್ರ ನಾಟೀಕಾರ, ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಭಾಸಗಿ, ಶಿವಕುಮಾರ ಬಾಗೋಡಿ, ರಾಮಾ ಪೂಜಾರಿ, ಬಾಬು ಶೇಖ್ ಪರಿಟ್, ಉಮೇಶ ವಾಲಿಕಾರ, ವೆಂಕಟೇಶ ಕಾಂಬಳೆ, ಶಿವರಾಜ ಕಾಂಬಳೆ ಸೇರಿದಂತೆ ಹಲವರ ಭಾಗವಹಿಸಿದ್ದರು.

ಇದನ್ನೂ ಓದಿ: ಅಂಬೇಡ್ಕರ್ ಜಯಂತ್ಯುತ್ಸವ: ಚಂದು ಪಾಟೀಲ ಅನ್ನಸಂತರ್ಪಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here