ನಾಳೆ ಫರಹತಾಬಾದ ವಲಯ ಮಟ್ಟದಿಂದ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ

0
24

ಕಲಬುರಗಿ : ಅಫಜಲಪುರ ಮತಕ್ಷೇತ್ರದಲ್ಲಿ ಬರುವ ಫರಹತಾಬಾದ ಗ್ರಾಮದಲ್ಲಿ  ದಲಿತ ಸಂಘಟನೆಗಳ ಮಹಾ ಒಕ್ಕೂಟ ಫರಹತಾಬಾದ ವಲಯ ಹಾಗೂ ಡಾ. ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಫರಹತಾಬಾದ ವಲಯ ಮಟ್ಟದ ವತಿಯಿಂದ ಇದೇ ಏ. 24 ರಂದು ಬೆಳಿಗ್ಗೆ 10.30 ಕ್ಕೆ ಶ್ರೀ ಶರಣಬಸವೇಶ್ವರ ರಥ ಬೀದಿ ಮೈದಾನದಲ್ಲಿ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ 131 ನೇ ಜಯಂತ್ಯೋತ್ಸವ ಅಂಗವಾಗಿ ” ಬಹಿರಂಗ ಸಭೆ” ಕಾರ್ಯಕ್ರಮ ನಡೆಯಲಿದೆ ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಖನ್ನಾ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮರುಳ ಶಂಕರ ದೇವರ ಪೀಠ, ಚಿಗರಳ್ಳಿ ತಾ.‌ ಜೇವರ್ಗಿ, ಉದ್ಘಾಟಕರಾಗಿ ಶಾಸಕ ಎಂ‌.ವೈ.ಪಾಟೀಲ, ಅಧ್ಯಕ್ಷತೆಯನ್ನು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಂ‌. ಖನ್ನಾ, ಉಪನ್ಯಾಸಕರಾಗಿ ನಿಖಿತರಾಜ ಮೌರ್ಯ, ಕು. ನಜ್ಮಾ ನಜೀರ್ ಚಿಕ್ಕನೇರಳ ಹಾಗೂ ಡಾ. ಕರಿಘೂಳೇಶ್ವರ ಎಸ್. ಫರಹತಾಬಾದ ಆಗಮಿಸಲಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಮುಖ್ಯ ಅತಿಥಿಗಳಾಗಿ ಫರಹತಾಬಾದ ಗ್ರಾ.ಪಂ. ಅಧ್ಯಕ್ಷ ಹುಣಚಪ್ಪಾ ಸಿ. ಸೀತನೂರ, ಮಾಜಿ ಜಿ.ಪಂ.ಸದಸ್ಯರಾದ ದಿಲೀಪ ಆರ್. ಪಾಟೀಲ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಅರುಣಕುಮಾರ ಎಂ. ವೈ.ಪಾಟೀಲ, ಕೆ. ಎಸ್. ಡಿ. ಎಸ್. ಎಸ್.‌ ರಾಜ್ಯ ಸಂಘಟನಾ ಸಂಚಾಲಕರಾದ ಅರ್ಜುನ ಭದ್ರೆ ಹಾಗೂ ದಲಿತ ಸಂಘಟನಾ  ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ಅವರು ಭಾಗವಹಿಸಲಿದ್ದಾರೆ.

ಮೆರವಣಿಗೆ ಮಧ್ಯಾಹ್ನ 3 ಗಂಟೆಗೆ  ಫರಹತಾಬಾದ ಪೋಲಿಸ್ ಠಾಣೆಯ ಸಿ.ಪಿ.ಐ.  ರಾಘವೇಂದ್ರ ಅವರು ಉದ್ಘಾಟನೆ ಮಾಡುವರು. ಸಿದ್ಧಾರ್ಥ ಚಿಮ್ಮಾಇದ್ಲಾಯಿ ತಂಡದಿಂದ ಭೀಮ ಕ್ರಾಂತಿ ಗೀತೆಗಳು ಜರುಗಲಿದೆ. ಪ್ರಾಸ್ತಾವಿಕ ಬಸವರಾಜ ಜೋಗೂರ, ಸ್ವಾಗತ ಶಿವಯೋಗಿ ಕೌಲಗಿ, ನಿರೂಪಣೆ ಡಾ.ಶಿವಕುಮಾರ ಶರ್ಮಾ ಹಾಗೂ ವಂದನಾರ್ಪಣೆಯನ್ನು ಬಸವರಾಜ ದೊಡ್ಡಮನಿ ಅವರಿಂದ ನೆರವೇರಲಿದೆ ಎಂದು ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಖನ್ನಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಸ್ ಐ ಅಕ್ರಮ ನೇಮಕಾತಿ ಹಗರಣ: ಎಡಿಜಿಪಿ ವರ್ಗಾವಣೆಗೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here