ಬಸವಣ್ಣನ ಪರಿಕಲ್ಪನೆ ಹೊಸದು: ಅತ್ತಿವೇರಿ ಮಾತೆ

0
113

ಕಲಬುರಗಿ: ವಿಶ್ವಾತ್ಮನನ್ನು ಅಂಗೈಯಲ್ಲಿ ಚುಳುಕಾಗಿಸಿದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು ಎಂದು ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಅಭಿಮತ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣ ನಡೆದಾಡಿದ ಶರಣರು ಬದುಕಿದ್ದ ನಮ್ಮ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಕಂಡು ಬರುತ್ತಿರುವುದು ದುರ್ದೈವದ ಸಂಗತಿ. ಈ ಜಗತ್ತನ್ನು ನಾವು ನೋಡುವುದೇ ಬೇರೆ, ಬಸವಣ್ಣ ನೋಡಿದ ಪರಿಕಲ್ಪನೆಯೇ ಬೇರೆಯಾಗಿತ್ತು ಎಂದರು.

Contact Your\'s Advertisement; 9902492681

ಮೂಢನಂಬಿಕೆ, ಜಾತಿಪದ್ಧತಿ ವರ್ಣಾಶ್ರಮ ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿದ ಅವರು ವೈಚಾರಿಕ ಬೀಜ ಬಿತ್ತಿದರು. ನಡೆದು ನುಡಿದ ಅವರ ವಚನಗಳು ಮೌಲ್ಯಗಳಿಂದ ಕೂಡಿವೆ. ಶರಣರ ಕೀರ್ತಿ ಯಾವುದೇ ಮಾಧ್ಯಮಗಳಿಲ್ಲದೇ ದೇಶ ವಿದೇಶಗಳಿಗೆ ಹಬ್ಬಿತ್ತು. ಕಾಶ್ಮೀರ, ತಮಿಳುನಾಡು, ಅಫಘಾನಿಸ್ತಾನದಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಬಸವ ತತ್ವದ ಪ್ರಚಾರ ಆಗಿದ್ದರೆ ನಮ್ಮ ದೇಶದಲ್ಲಿ ಅಶಾಂತಿ ವಾತಾವರಣ ಇರುತ್ತಿರಲಿಲ್ಲ ಎಂದರು.
ಕೂಡಲ ಸಂಗಮದ ಬಸವಧರ್ಮ ಪೀಠದ ಜಗದ್ಗುರು ಡಾ. ಗಂಗಾ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ನೇತೃತ್ವ ವಹಿಸಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಖನಿಜಾ ಫಾತಿಮಾ ಉದ್ಘಾಟಿಸಿದರು. ಡಾ. ಶಕುಂತಲಾ ದುರ್ಗಿ ಷಟಸ್ಥಲ ಧ್ವಜಾರೊಹಣ ನೆರವೇರಿಸಿದರು. ಕಾವೇರಿ ಪಾಟೀಲ್, ಮಹೇಶ್ವರಿ ವಾಲಿ, ನಳಿನಿ ಮಹಾಗಾಂವಕರ್, ಡಾ. ಶಿವಶರಣಪ್ಪ ಮೋತಕಪಲ್ಲಿ, ವೈಜನಾಥ, ಕೆ.ಎ.ಕಲ್ಬುಗಿ, ರವಿಹರಗಿ ಉಪಸ್ಥಿತರಿದ್ದರು.
ಅನನ್ಯ ಪ್ರಾರ್ಥಿಸಿದರು. ಮಾಲತಿ ರೇಷ್ಮಿ ಸ್ವಾಗತಿಸಿದರು. ಪ್ರತಿಭಾ ಬಿದರಿ ವಂದಿಸಿದರು, ವಿಜಯಲಕ್ಷ್ಮೀ ನೇಪೆರಿ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸ್ವಂತ ಕಾಲ ಮೇಲೆ ನಿಂತು ದುಡಿದು ತಿಂದರೆ ಅದು ಬಿಸಿ ಅನ್ನ. ಅಪ್ಪ-ಅಮ್ಮ ಗಳಿಸಿದನ್ನು ತಿಂದರೆ ಅದು ತಂಗಳು ಅನ್ನ, ಲಂಚ-ವಂಚನೆ, ಮೋಸಗಳಿಂದ ತಿಂದರೆ ಅದು ಹಳಸಿದ ಅನ್ನ. ಅತಂತ್ರ, ಕುತಂತ್ರ, ಪರತಂತ್ರ, ಸ್ವತಂತ್ರ ಹೀಗೆ ತಲೆಗಳಲ್ಲಿ ನಾಲ್ಕು ವಿಧಗಳಿದ್ದು, ಸ್ವತಂತ್ರ ತಲೆಯವರಾಗಿ ಬದುಕಬೇಕು. -ಮಾತೆ ಬಸವೇಶ್ವರಿ, ಅತ್ತಿವೇರಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here