ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ: ಸೂಕ್ತ ತನಿಖೆಗೆ ಆಗ್ರಹ

0
27

ಕಲಬುರಗಿ: ಇಂದು AIDSO ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದುಗಡೆ ಪ್ರತಿಭಟನೆ ಮಾಡಿ, ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಈ ಪ್ರತಿಭಟನೆ ಉದ್ದೇಶಿಸಿ AIDSO ಜಿಲ್ಲಾ ಅಧ್ಯಕ್ಷರಾದ ಹಣಮಂತ ಎಸ್ ಎಚ್, ಅವರು ಮಾತನಾಡುತ್ತಾ ಈಗಾಗಲೇ ತಿಳಿದಿರುವಂತೆ,  ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರನ್ನು (ಮೌಲ್ಯಮಾಪನ) ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪರೀಕ್ಷೆಗೆ ಸಿದ್ಧಪಡಿಸಿದ್ದ ಭೂಗೋಳಶಾಸ್ತ್ರ ವಿಷಯದ 18 ಪ್ರಶ್ನೆಗಳು ಸೋರಿಕೆ ಆಗಿದ್ದವು. ಈಗ ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇಂಗ್ಲೀμï ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಶೈಕ್ಷಣಿಕ ರಂಗದಲ್ಲಿ ಹಾಗೂ ನೇಮಕಾತಿ ವಿಚಾರದಲ್ಲಿ ಈ ರೀತಿಯ ಅಕ್ರಮಗಳು ನಡೆಯುತ್ತಿರುವುದು ಅತ್ಯಂತ ವಿμÁದನೀಯ ಮತ್ತು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಮುಸ್ಲಿಂ ಬಾಂಧವರ ‘ಈದ್ ಉಲ್ ಫಿತರ್’ ಹಬ್ಬದ ಪವಿತ್ರ ಆಚರಣೆ

AIDSO ವಿದ್ಯಾರ್ಥಿ ಸಂಘಟನೆಯು ಕೆಲವು ಆತಂಕಗಳನ್ನು ವ್ಯಕ್ತಪಡಿಸುತ್ತಾ, ಕೂಡಲೇ ಈ ವಿಚಾರದಲ್ಲಿ ಮುಖ್ಯ ಮಂತ್ರಿಗಳು ಮಧ್ಯಪ್ರವೇಶಿಸಿ ಬಗೆಹರಿಸಬೇಕು. ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದಾತ್ತ ವೃತ್ತಿಗೆ ಭ್ರμÁ್ಟಚಾರದ ಮೂಲಕ ನೇಮಕಾತಿ ಪಡೆದರೆ ಅದು ಅತ್ಯಂತ ಖೇದಕರ. ಅಂತಹವರಿಂದ ಯಾವ ರೀತಿಯ ಬೋಧನೆ ನಿರೀಕ್ಷಿಸಲು ಸಾಧ್ಯ? ಅವರು ಯಾವ ರೀತಿ ವಿದ್ಯಾರ್ಥಿಗಳ ವ್ಯಕ್ತಿತ್ವ, ಯೋಚನೆ ಹಾಗೂ ಜ್ಞಾನವನ್ನು ಬೆಳೆಸಲು ಸಾಧ್ಯ? ಯಾವ ನೈತಿಕತೆಯನ್ನು ಬಿತ್ತಲು ಸಾಧ್ಯ? ಪ್ರಸ್ತುತ ಅಕ್ರಮದಲ್ಲಿ, ಪತ್ರಿಕೆಗಳ ವರದಿ ಅನುಸಾರ ಹಲವು ವಿವಿಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವವರು, ಉಪನ್ಯಾಸಕರು ತೊಡಗಿದ್ದಾರೆ. ಶೈಕ್ಷಣಿಕ ಜವಾಬ್ದಾರಿ ಹೊಂದಿರುವವರೇ ಇಂತಹ ಅಕ್ರಮಗಳಿಗೆ ಪುಷ್ಠಿ ನೀಡಿದರೆ, ಇನ್ನು ಶಿಕ್ಷಣವನ್ನು ಉಳಿಸುವವರು ಯಾರು ಎಂಬ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿಗಳಾದ ತುಳಜರಾಮ ಎನ್ ಕೆ ಅವರು ಮಾತನಾಡುತ್ತಾ, ಈಗ ಭಾಗಿಯಾಗಿದ್ದವರನ್ನು ಬಂಧಿಸಿ, ಜೈಲಿಗೆ ಹಾಕಲಾಗಿದೆ. ಇದು ಇಲ್ಲಿಗೆ ಕೊನೆಯಾಗಬಾರದು. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ಮತ್ತು ಮೀನುಗಳನ್ನು ಹಿಡಿದು ತಿಮಿಂಗಲಗಳನ್ನು ಬಿಟ್ಟಂತೆಯು ಆಗಬಾರದು. ಈ ಅಕ್ರಮದ ಕುರಿತು ಸರಿಯಾದ ತನಿಖೆ ನಡೆಸಿ, ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ, ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಚಿತ್ತಾಪುರ ಶರಣ ಬಸವೇಶ್ವರ ನಾಟ್ಯ ಸಂಘದಿಂದ ನಾಟಕ: ನಾಗರಾಜ್ ಸಾಹು ಭಂಕಲಗಿ

ಈ ಪ್ರತಿಭಟನೆಯಲ್ಲಿ ಂIಆSಔ ಜಿಲ್ಲಾ ಉಪಾಧ್ಯಕ್ಷರಾದ ಸ್ನೇಹ ಕಟ್ಟಿಮನಿ, ಸದಸ್ಯರಾದ ಪ್ರೀತಿ ದೊಡ್ಡಮನಿ, ಭೀಮು ಆಂದೊಲಾ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here