ರಾಜ್ಯ ಮಟ್ಟದ ಜಂಗಮಶೆಟ್ಟಿ ರಂಗ ಪ್ರಶಸ್ತಿಗಾಗಿ ರಂಗ ಸಾಧಕರ ನಾಮನಿರ್ದೇಶನಕ್ಕೆ ಮನವಿ

0
16

ಕಲಬುರಗಿ: ಕಲಬುರಗಿಯ ರಂಗ ಸಂಗಮ ಕಲಾ ವೇದಿಕೆ ಸಂಸ್ಥೆಯು ಕಳೆದ ೮ ವರ್ಷಗಳಿಂದ ದಿ.ಜಂಗಮಶೆಟ್ಟಿಯವರ ಸ್ಮರಣಾರ್ಥ ರಂಗಭೂಮಿಯಲ್ಲಿ ಸಾಧನೆ ಮಾಡಿದವರಿಗಾಗಿ ರಾಜ್ಯ ಮಟ್ಟದ ಜಂಗಮಶೆಟ್ಟಿ ಪ್ರಶಸ್ತಿ ಯನ್ನು ಪ್ರತಿ ವರ್ಷ ಜುಲೈ ೧೮ ರಂದು ಕೊಡಮಾಡಲಾಗುತ್ತದೆ ಎಂದು ವೇದಿಕೆ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ಈ ಕೆಳಕಂಡ ರಂಗ ಸಾಧಕರಿಗೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ.
೧)ಬಸವರಾಜಯ್ಯಾಸ್ವಾಮಿ ಭೀಮನಹಳ್ಳಿ,
೨)ಈಶ್ವರಪ್ಪ ಫರಹತಾಬಾದ, ೩)ಮನುಬಾಯಿ ನಾಕೋಡ, ೪)ಮಂಡ್ಯ ರಮೇಶ್,
೫)ಸರಸ್ವತಿ / ಜುಲೇಖಾ ಬೇಗಂ,
೬)ಶ್ರೀ ಪಾದ ಭಟ್ಟ,
೭)ಶಿವಯ್ಯಸ್ವಾಮಿ ಬಿಬ್ಬಳ್ಳಿ, ೮)ದೀಪಕ್ ಮೈಸೂರು ಇವರಿಗೆ ಪ್ರಶಸ್ತಿ ನೀಡಲಾಗಿದೆ.

Contact Your\'s Advertisement; 9902492681

೨೦೨೨ನೇ ಸಾಲಿನ ಪ್ರಶಸ್ತಿಗಾಗಿ ರಂಗ ಸಾಧಕರೊಬ್ಬರನ್ನು ಆಯ್ಕೆ ಮಾಡಬೇಕಾಗಿದ್ದು ಅಂಥವರ ನಾಮ ನಿರ್ದೇಶನ ಮಾಡಬೇಕೆಂದು ಪ್ರಶಸ್ತಿಯ ಆಯ್ಕೆ ಸಮಿತಿಯು ಸಾರ್ವಜನಿಕರನ್ನು ಕೋರುತ್ತದೆ. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಲೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಅರ್ಹ ಸಾಧಕರ ವಿವರಗಳನ್ನು ಜಂಗಮಶೆಟ್ಟಿ ರಂಗಪ್ರಶಸ್ತಿಗಾಗಿ ಈ ಕೆಳಗೆ ನಮೂದಿಸಿದ ವಿಳಾಸಕ್ಕೆ ದಿನಾಂಕ ೨೦.೬.೨೦೨೨ರ ಒಳಗಾಗಿ ಕಳುಹಿಸಬೇಕೆಂದು ಈ ಮೂಲಕ ಕೋರಿದ್ದಾರೆ. ಸಂಪರ್ಕಿಸುವ ವಿಳಾಸ: ಡಾ ಸುಜಾತಾ ಜಂಗಮಶೆಟ್ಟಿ
ಗೋಕುಲ ಸುಪರ್ ಮಾರ್ಟ್, ೨ನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆಪಕ್ಕ, ಹಳೇ ಜೇವರಗಿ ರಸ್ತೆ, ಕಲಬುರಗಿ -೦೨, ಮೊ. 9480409732.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here