ಕಲಬುರಗಿ ಪಾಲಿಕೆ ನೂತನ ಆಯುಕ್ತರಾಗಿ ಭುವನೇಶ ದೇವಿದಾಸ ಪಾಟೀಲ ಅಧಿಕಾರ ಸ್ವೀಕಾರ

1
17

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಭುವನೇಶ ದೇವಿದಾಸ ಪಾಟೀಲ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ: ಜನಸಮರ್ಥ ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಜಾರಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ: ಸಂಸದ ಜಾಧವ

Contact Your\'s Advertisement; 9902492681

೨೦೧೮ನೇ ವೃಂದದ ಐ.ಎ.ಎಸ್ ಅಧಿಕಾರಿ ಆಗಿರುವ ಇವರು ಬಿ.ಇ. ಪದವೀಧರರಾಗಿದ್ದು, ಮಹಾರಾಷ್ಟ್ರದ ಪುಣೆಯ ಮೂಲದವರಾಗಿದ್ದಾರೆ. ಇವರು ಬಸವಕಲ್ಯಾಣ ಉಪವಿಭಾಗದ ಸಹಾಯಕ ಆಯುಕ್ತರಾಗಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ

ಈ ಸಂದರ್ಭದಲ್ಲಿ ಭುವನೇಶ ದೇವಿದಾಸ ಪಾಟೀಲ ಇವರ ಪತ್ನಿಯೂ ಆದ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ಮಾರ್ ಅವರು ಪುಷ್ಪಗುಚ್ಚ ನೀಡಿ ಶುಭ ಕೋರಿದರು. ಪಾಲಿಕೆಯ ಇನ್ನಿತರ ಅಧಿಕಾರಿಗಳು ಸಹ ಇದ್ದರು.

ಇದನ್ನೂ ಓದಿ: ರೈತರು ಇ-ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here