ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

0
39

ಕಲಬುರಗಿ: ತಾಲ್ಲೂಕಿನ ಅಳಂದ ರಸ್ತೆಯ ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿ ಹತ್ತಿರ ವ್ಯಕ್ತಿಯೊಬ್ಬನ ಮೇಲೆ ಕಲ್ಲು ಎತ್ತಿಹಾಕಿರುವ ಘಟನೆ ನಡೆದಿದೆ.

ಸಿದ್ರಾಮ ಕಾಶೀನಾಥ ಸರಡಗಿ (40) ಕೊಲೆಯಾದ ವ್ಯಕ್ತಿ, ಕಾಶೀನಾಥ ಅಳಂದ ತಾಲ್ಲೂಕಿನ ಕಾಮನಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದ್ದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಮುಖದ ಮೇಲೆ ಸಂಪೂರ್ಣವಾಗಿ ಜಜ್ಜಿದ ಕಾರಣ ಗುರುತು ಸಿಗದಂತಾಗಿದ್ದು, ಹತ್ಯೆ ಮಾಡಿರುವ ಆರೋಪಿಗಳು ಹಾಗೂ ಕೊಲೆಗೆ ಕಾರಣ ತಿಳಿದುಬಂದಿರುವುದಿಲ್ಲ.

Contact Your\'s Advertisement; 9902492681

ಘಟನೆಯ ಕುರಿತು ಸುದ್ದಿ ತಿಳಿದ ತಕ್ಷಣ ಕಲಬುರಗಿ ಜಿಲ್ಲೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here