ಜನ್ಮದಿನದ ನಿಮಿತ್ತ ಹಣ್ಣು ಹಂಪಲು, ಹಾಲು ಬ್ರೇಡ ವಿತರಣೆ

0
115

ಕಲಬುರಗಿ: ಬಹುಜನ ವಿದ್ಯಾರ್ಥಿ ಫೋರ್ಸ್ ಸಂಘಟನೆಯ ಚಿಂಚೋಳಿ ತಾಲ್ಲೂಕ ಅಧ್ಯಕ್ಷ ಯಲ್ಲಾಲಿಂಗ ದಂಡಿನ್ ಹಾಗೂ ಅಜರೋದಿನ್ ಎಂಎಂಕೆ ಇವರ ಜನ್ಮದಿನ ನಿಮಿತ್ತ ಅವರ ಗೆಳೆಯರ ಬಳಗದ ವತಿಯಿಂದ ಸರಕಾರಿ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಣ್ಣು ಹಂಪಲು, ಹಾಲು ಬ್ರೇಡ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೈಲಾಸಪತಿ ವಿಶ್ವಕರ್ಮ ಇವರು ಮಾತನಾಡಿ ಯಲ್ಲಾಲಿಂಗ ದಂಡಿನ ಹಾಗೂ ಅಜರೋದಿನ್ ಇವರು ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಕೇಲಸ ಮಾಡುತ್ತಾರೆ ಎಂದು ಹೇಳಿದರು.

Contact Your\'s Advertisement; 9902492681

ಸರಕಾರಿ ಆಸ್ಪತ್ರೆಯ ತಾಲ್ಲೂಕ ಆಡಳಿತ ಅಧಿಕಾರಿ ಸಂತೋಷ ಪಾಟೀಲ್ ಇವರು ಮಾತನಾಡಿ ಯಲ್ಲಾಲಿಂಗ ದಂಡಿನ್ ಹಾಗೂ ಅಜರೋದಿನ್ ಇವರಿಗೆ ಶುಭಾಶಯ ಕೋರಿ ಸಂತೋಷ ವೇಕ್ತಪಡಿಸಿದರು.

ಈ ಸಂದರ್ಭದಲ್ಲಿ ಗೌತಮ ಬೌಮ್ನಳಿ, ಡಾ.ಎಮ್.ಎನ್.ಸುಲ್ತಾಪೂರ್, ರಾಜಶೇಖರ್ ಮುಸ್ತಾರಿ, ಕೆ ಮಹೇಶ್, ದಿನೇಶ್ ಮೋಘ್, ಶರಣು ಟಿಟಿ, ಚಂದ್ರಕಾಂತ ಕಟ್ಟಿಮನಿ, ಅಂಕಿತ ಕಮಲಕರ್, ರುದ್ರಮುನಿ ದಂಡಿನಿ ಇನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here