ಕಲಬುರಗಿ: ಚಿತ್ತಾಪೂರ ತಾಲೂಕಿನ ರಾವೂರದ ಶ್ರೀ ಸಚ್ಚಿದಾನಂದ ಪ್ರೌಢಶಾಲೆಯ ಎನ್.ಸಿ.ಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶರಣಬಸಪ್ಪ ಪಿ ಸಜ್ಜನರವರು ಮಹಾರಾಷ್ಟ್ರ ರಾಜ್ಯದ ನಾಗಪುರಜಿಲ್ಲೆಯ ಕಾಮಟಿಯಲ್ಲಿ ನಡೆದ ಭಾರತೀಯ ಸೇನಾ ತರಬೇತಿಯಲ್ಲಿ ೪೫ ದಿನಗಳ ಕಠಿಣ ತರಬೇತಿಯನ್ನು ಪಡೆದು ಎನ್.ಸಿ.ಸಿ ೩ನೇ ದರ್ಜೆಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇವರನ್ನು ಕಲಬುರಗಿ ೩೨ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಕಛೇರಿಯಲ್ಲಿ ಸಿಂಗಲ್ ಸ್ಟಾರ್ ನೀಡುವ ಮೂಲಕ ಗೌರವ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎ.ಒ.ಲೆಫ್ಟಿನೆಂಟ್ ಕರ್ನಲ್ ಸಂಜೀವ ಸರಿನ್, ಮೇಜರ್ ಸುಬೇದಾರ್, ಮಹೇಂದ್ರ ಸಿಂಗ್, ಕ್ಯಾಪ್ಟನ್ ಎಂ.ಎಸ್.ರಾವೂರ್, ಚೀಪ್ ಆಫಿಸರ್ ಮಹಮ್ಮದ್ ರಫೀಕ್ ಮತ್ತು ಸಿಬ್ಬಂದಿ ವರ್ಗ ಹಾಗೂ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಗಳಾದ ಗುಂಡಣ್ಣ ಬಾಳಿ, ಮುಖ್ಯ ಗುರುಗಳಾದ ವಿದ್ಯಾಧರ ಖಂಡಾಳ, ರಾವೂರ ಗ್ರಾಮದ ಪ್ರಮುಖ ಮುಖಂಡರು ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.