ಕಲಬುರಗಿ : ನಗರದ ಸಾರಿಗೆ ಡಿಪೋ ೧ ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಚಾಲಕ ಮಾಣಿಕ್ ಅವರ ಪುತ್ರ ಅನುರಾಗ್ ಧರು ಅವರನ್ನು ಐಪಿಎಸ್ ಗೆ ಆಯ್ಕೆಗೊಂಡ ಪ್ರಯುಕ್ತ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಆಂತರಿಕ ಗುಂಪು ವಿಮಾ ಯೋಜನೆಯಡಿ ಸೇವೆಯಲ್ಲಿದ್ದಾಗ ಮೃತಪಟ್ಟ ೧೩ ಸಿಬ್ಬಂದಿಯ ಕುಟುಂಬಕ್ಕೆ ತಲಾ ೧೦ ಲಕ್ಷ ರೂ.ಗಳ ಚೆಕ್ ನೀಡಲಾಯಿತು. ನಿಗಮದ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ, ಜಿಲ್ಲಾಧಿಕಾರಿ ಯಶವಂತ ಗುರುಕರ್, ನಿಗಮದ ಎಂ.ಡಿ ರಾಚಪ್ಪ ಮುಂತಾದವರು ಇದ್ದರು.