ಆನೇಕಲ್: ವಕೀಲರ ಸಂಘದ ಚುನಾವಣೆ- ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಪುರುಷೋತ್ತಮ್ ಸ್ಪರ್ಧೆ

0
24

ಆನೇಕಲ್: ಆನೇಕಲ್ ವಕೀಲರ ಸಂಘದ ಚುನಾವಣೆಯಲ್ಲಿ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ವಕೀಲ ಪುರುಷೋತ್ತಮ್ ನಾಮಪತ್ರ ಸಲ್ಲಿಸಿದ್ದಾರೆ. ಜುಲೈ 24 ರ ಭಾನುವಾರ ಚುನಾಚಣೆ ನಡೆಯಲಿದೆ.

ನಾಮಪತ್ರ ಸಲ್ಲಿಸಿ ಮಾತನಾಡಿದ ವಕೀಲ ಪುರುಷೋತ್ತಮ್, ಟೆಲಿ ಲಾ ಮೂಲಕ ಈಗಾಗಲೇ ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆಯನ್ನು ಒದಗಿಸುತ್ತಾ ಬಂದಿದ್ದೇನೆ. ಇದರ ಮುಂದುವರೆದ ಭಾಗವಾಗಿ ನ್ಯಾಯಾಂಗ ವ್ಯವಸ್ಥೆಗೆ ನಾನು ಒಂದು ಅಳಿಲಿ ಸೇವೆ ಮಾಡುವ ಉದ್ದೇಶದಿಂದ ಚುನಾಚಣೆಗೆ ಸ್ಪರ್ಧಿಸಿದ್ದೇನೆಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಆನೇಕಲ್ ನ ಹಿರಿಯ ಹಾಗೂ ಕಿರಿಯ ವಕೀಲರು ಹೀಗಾಗಲೆ ಬೆಂಬಲವನ್ನು ನೀಡಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಆನೇಕಲ್ ವಕೀಲರ ಸಂಘದ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾರೇ ಗೆದ್ದರು ಅಣ್ಣತಮ್ಮರಂತೆ ಇರುತ್ತೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಮಪತ್ರ ಸಲ್ಲಿಸುವಾಗ ಹಿರಿಯ ವಕೀಲರಾದ ಆರ್ ವಿ ವಿ ಮೂರ್ತಿ, ಎ.ಜಿ ರಾಜು, ಶ್ರೀಕಂಠಾಚಾರಿ, ಚೂಡಸಂದ್ರ ವೇಣು, ಲಕ್ಮೀಸಂಪತ್, ಮುತ್ತನಲ್ಲೂರು ಮಹೇಶ್, ಸಂಘರ್ಷ, ಶ್ರೀನಿವಾಸ್, ನಾಗರಾಜ್ ತ್ಯಾವಕನಹಳ್ಳಿ ರೂಪ, ಶಶಿಕುಮಾರ್ ಅನುರಾಧಾ ಆರ್, ‌ಸುಜೀಂದ್ರ, ಕಿರಣ್, ರಾಘವೇಂದ್ರ, ಇನ್ನೂ ಅನೇಕ ವಕೀಲರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here