ಸಾವಳೇಶ್ವರ ಕ್ರಾಸ್- ಪಡಸಾವಳಿ ರಸ್ತೆಗೆ ೪ ಕೋಟಿ – ಶಾಸಕ ಸುಭಾಷ್‌ ಆರ್‌ ಗುತ್ತೇದಾರ

0
222

ಆಳಂದ: ಮತಕ್ಷೇತ್ರದ ವ್ಯಾಪ್ತಿಯಲ್ಲಿಅಭಿವೃದ್ಧಿ ಕಾರ್ಯಗಳು ಭರದಿಂದಜರುಗುತ್ತಿದ್ದುತಾಲೂಕಿನ ಮೂಲೆ ಮೂಲೆಯಲ್ಲಿ ಕಾಮಗಾರಿಗಳು ನಡೆದಿವೆ ಎಂದು ಆಳಂದ ಶಾಸಕ ಸುಭಾಷ್‌ಆರ್‌ಗುತ್ತೇದಾರ ಹೇಳಿದರು.

ಶುಕ್ರವಾರ ಸಾವಳೇಶ್ವರ ಕ್ರಾಸ್ ಹತ್ತಿರ ಲೋಕೋಪಯೋಗಿಇಲಾಖೆಯಿಂದ ಮಂಜೂರಾದ ಬಾಲಖೇಡ- ಬೀಳಗಿ ೧೨೪ ರಾಜ್ಯ ಹೆದ್ದಾರಿಯ ೪.೫ ಕೀ.ಮೀ ಉದ್ದದ ಸಾವಳೇಶ್ವರ ಕ್ರಾಸ್‌ನಿಂದ ಪಡಸಾವಳಿ ಗ್ರಾಮದವರೆಗಿನರಸ್ತೆಯ ನಿರ್ಮಾಣಕಾಮಗಾರಿಗೆಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯದಲ್ಲಿಕೊರೋನಾ ನಂತರಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರಗತಿಯ ವೇಗ ದೊರತಿದೆ. ಕೊರೋನಾ, ನೆರೆ ಪ್ರವಾಹದಿಂದಆರ್ಥಿಕ ಹೊಡೆತಉಂಟಾಗಿದ್ದರೂಸಹ ಅಭಿವೃದ್ಧಿಕಾರ್ಯಕ್ಕೆ ಬೊಮ್ಮಾಯಿ ಸರ್ಕಾರ ಬದ್ಧವಾಗಿದೆ ಈ ನಿಟ್ಟಿನಲ್ಲಿರಾಜ್ಯದ ಅನೇಕ ಕಾಮಗಾರಿಗಳಿಗೆ ಮಂಜೂರಿ ನೀಡಿದೆಎಂದರು.

ಸಾವಳೇಶ್ವರ- ಪಡಸಾವಳಿ ರಸ್ತೆಯ ಸುಧಾರಣೆಯಿಂದ ಸಾರಿಗೆ ಸಂಪರ್ಕತುಂಬಾ ಹತ್ತಿರವಾಗಲಿದೆ ಮತ್ತು ಸಮಯದ ಉಳಿತಾಯವೂ ಆಗಲಿದೆ.ಗುತ್ತಿಗೆದಾರರು ನಿಗದಿತಅವಧಿಯಲ್ಲಿಗುಣಮಟ್ಟದಕಾಮಗಾರಿ ಮಾಡಬೇಕುಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಳಂದ ಮಂಡಲ ಬಿಜೆಪಿ ಅಧ್ಯಕ್ಷಆನಂದರಾವ ಪಾಟೀಲ ಕೊರಳ್ಳಿ, ಮುಖಂಡರಾದ ಶರಣಪ್ಪ ಸಂಜವಾಡ, ಸತೀಶಖಜೂರಿ, ಬಸವರಾಜ ಸಾಲೇಗಾಂವ, ಪಡಸಾವಳಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಬೆಳಂ, ಕಾಂತು ಬೆಳಂ, ಸರಸಂಬಾಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನಕುಂಬಾರ,ಅನೀಲಕುಮಾರಖಾನಾಪೂರೆ,ಗುತ್ತಿಗೆದಾರಅರುಣಕುಮಾರಡೋಣಿ, ಇಲಾಖೆಯಗುರುದೇವ ಕಳಸ್ಕರ್, ಅರುಣಕುಮಾರ ಬಿರಾದಾರ ಸೇರಿದಂತೆಇತರರುಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here