ಖರ್ಗೆ ಜನ್ಮದಿನ ನಿಮಿತ್ತ ಬಡವರಿಗೆ ಅನ್ನ ಸಂತರ್ಪಣೆ

0
8

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭೆಪ್ರತಿಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ವಾರ್ಡನಂ.೪೩.ರ ಪಾಲಿಕೆ ಸದಸ್ಯರಾದ ವರ್ಷಾ ರಾಜೀವ ಜಾನೆ ನೇತೃತ್ವದಲ್ಲಿ ಬಡವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ವಿಠಲ್ ದೋಡಮನಿ, ಬೌದ್ದ ಧರ್ಮದ ಭಂತೆಜಿ, ಕಾಂಗ್ರೇಸ್ ಮುಖಂಡರಾದ ಸೋಮಶೇಖರ ಮೇಲಿನಮನಿ, ಅಶೋಕ ವಿರನಾಯಕ, ರಾಹುಲ ಜಾನೆ, ನಿತೀನ ಅಂಬಲಗಿ, ಸಂಗಾನಂದ ರಂಗಾರೆ, ನಾಗೇಶ ಮಠಪತಿ, ಅಶೋಕ ಬಂಡೆ, ಕೃಷ್ಣ ಹಾಬಳಕರ್, ಹಣಮಂತ ಭಜಂತ್ರಿ, ಈರಣ್ಣ ಝಳಕಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here