ಜನೆವರಿ ೮ರ ಭಾರತ ಬಂದ್‌ಗೆ ಎಲ್ಲರೂ ಬೆಂಬಲಿಸಿ: ಸುರೇಖಾ ಕುಲಕರ್ಣಿ

0
276

ಸುರಪುರ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ೨೦೨೦ರ ಜನೆವರಿ ೮ ರಂದು ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಒಂದಾಗಿ ಭಾರತ ಬಂದ್ ಆಚರಿಸುತ್ತಿವೆ.ಇದರಲ್ಲಿ ಎಲ್ಲರೂ ತಪ್ಪದೆ ಭಾಗವಹಿಸುವಂತೆ ಸಮಿತಿಯ ರಾಜ್ಯ ಉಪಾಧ್ಯಕ್ಷ ಸುರೇಖಾ ಕುಲಕರ್ಣಿ ತಿಳಿಸಿದರು.

ನಗರದ ಕರ್ನಾಟಕ ಬಿ.ಇಡಿ ಕಾಲೇಜಿನಲ್ಲಿ ಕಾರ್ಮಿಕ ಸಂಘಟನೆಗಳ ತಾಲೂಕು ಸಮಿತಿ ಸಮಾವೇಶ ಉದ್ಘಾಟಿಸಿ ಮಾತನಾಡಿ,ನವೆಂಬರ್ ೨೦ ರಂದು ಬೆಂಗಳೂರಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ನಿರ್ಣಯಿಸಿದಂತೆ ರಾಜ್ಯಾದ್ಯಂತ ಎಲ್ಲೆಡೆ ಸಮಾವೇಶಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.ಅದರಂತೆ ಇಂದು ಸುರಪುರ ತಾಲೂಕು ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ದೇಶದಲ್ಲಿ ರೈತ ಕಾರ್ಮಿಕರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.ದೇಶದಲ್ಲಿನ ಆರ್ಥಿಕ ಕುಸಿತ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ,ದೇಶಿಯ ಉತ್ಪಾದನೆಯ ಕುಸಿತ ಇತ್ಯಾದಿಗಳಿಂದ ದೇಶದ ಶ್ರಮಿಕವರ್ಗ ಸಂಕಷ್ಟ ಹೆದರಿಸುವಂತಾಗಿದೆ. ಕೇಂದ್ರ ಸರಕಾರ ಬಡವರ ದೀನ ದಲಿತ ಮತ್ತು ಕಾರ್ಮಿಕರ ಏಳಿಗೆಯನ್ನು ಮರೆತು ಬಂಡವಾಳ ಶಾಹಿಗಳ ಬೆಂಬಲಕ್ಕೆ ನಿಲ್ಲುತ್ತಿದೆ ಇದನ್ನು ಇಂದು ನಾವೆಲ್ಲರು ಖಂಡಿಸದಿದ್ದರೆ ಮುಂದೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಬಸಮ್ಮ ಆಲ್ಹಾಳ ಮಾತನಾಡಿ,ಜನೆವರಿ ೮ ರಂದು ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ನಡೆಯುವ ಭಾರತ ಬಂದ್‌ನಲ್ಲಿ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ನಾವೆಲ್ಲ ಭಾಗವಹಿಸುವ ಮೂಲಕ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸೋಣ ಹಾಗು ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳೋಣ ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ದಲಿತ ಹೋರಾಟಗಾರರಾದ ಭೀಮರಾಯ ಸಿಂದಗೇರಿ, ಪ್ರಕಾಶ ಆಲ್ಹಾಳ, ಡಿವಾಯ್‌ಎಫ್‌ಐ ಮುಖಂಡ ಹಣಮಂತ್ರಾಯ ದೇವಿಕೇರಾ,ಅಂಗನವಾಡಿ ನೌಕರರ ಹುಣಸಗಿ ತಾಲೂಕು ಅಧ್ಯಕ್ಷ ನಸೀಮಾ ಮುದ್ನೂರು ಇದ್ದರು.ಪರವೀನ್ ಬೇಗಂ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು,ಜಯಶ್ರೀ ವಂದಿಸಿದರು ಕಾರ್ಯಕ್ರಮದಲ್ಲಿ ತಾಲೂಕಿನ ಅಂಗನವಾಡಿ ನೌಕರರು,ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here