ನಾಳೆ ನಗರಕ್ಕೆ ಕೆಆರ್‌ಎಸ್ ಜನಚೈತನ್ಯ ಯಾತ್ರೆ: ಸೈಬಣ್ಣಾ ಜಮಾದಾರ

1
14

ಕಲಬುರಗಿ: ’ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರಂಭಿಸಿರುವ ಎರಡನೇ ಹಂತದ ಜನಚೈತನ್ಯ ಯಾತ್ರೆಯು ಸೋಮವಾರ (ಜುಲೈ ೨೫ರಂದು) ಕಲಬುರಗಿಗೆ ಬರಲಿದೆ’ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಬಣ್ಣಾ ಜಮಾದಾರ ತಿಳಿಸಿದರು.

ಅಂದು ಕಲಬುರಗಿ ನಗರದ ಹುಮನಾಬಾದ್ ವರ್ತುಲ ರಸ್ತೆ ಬಳಿಯಿಂದ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆರಂಭವಾಗುವ ಯಾತ್ರೆಯು, ಗಂಜ್, ಸೂಪರ್ ಮಾರ್ಕೆಟ್ ರಸ್ತೆ ಮೂಲಕ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಯಾತ್ರೆಯ ಮಾರ್ಗಮಧ್ಯೆ ಬರುವ ತಹಶೀಲ್ದಾರ್ ಕಚೇರಿ, ಆರ್‌ಟಿಒ, ಪೊಲೀಸ್ ಠಾಣೆಗಳ ಬಳಿ ತೆರಳಿ ಲಂಚಮುಕ್ತ ಅಭಿಯಾನ ಕೈಗೊಳ್ಳುವುದರ ಜತೆಗೆ ಅಲ್ಲಿನ ಜನರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Contact Your\'s Advertisement; 9902492681

’ರಾಜ್ಯದ ಇಂದಿನ ದುರಾಡಳಿತ ಹಾಗೂ ಮೂರು ಪಕ್ಷಗಳ ಪರಮಭ್ರಷ್ಟ, ನೀಚ ರಾಜಕಾರಣವನ್ನು ಕೊನೆಗಾಣಿಸಲು ಯಾತ್ರೆ ಕೈಗೊಂಡಿದ್ದು, ಕೆಆರ್‌ಎಸ್ ಪಕ್ಷವು ರಾಜ್ಯವನ್ನು ಸಧೃಢ ಹಾಗೂ ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ಮಾಡಲು ಶ್ರಮಿಸುತ್ತಿದೆ’ ಎಂದು ಹೇಳಿದರು.

’ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ೩೭೧ (ಜೆ) ಕಾಯ್ದೆಯು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹಾಗಾಗಿ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ತೊಂದೆಯಾಗುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ . ಸರ್ಕಾರ ’ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ’ಯ ಹೆಸರನ್ನು ಮಾತ್ರ ಬದಲಾಯಿಸಿದೆ. ನಿಜವಾದ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಕಾಮಗಾರಿಗಳೆಲ್ಲ ಕಳೆಪೆಯಿಂದ ಕೂಡಿ ಭಾರಿ ಅವ್ಯವಹಾರ ನಡೆಯುತ್ತಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ವಿಜಯ ಜಾಧವ, ಕಲಬುರಗಿ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಮಠಪತಿ, ನಗರ ಅಧ್ಯಕ್ಷ ಶಿವಪುತ್ರ ಗರೂರ, ಉಪಾಧ್ಯಕ್ಷ ಅಮರ ಮಹಾಗಾಂವಕರ, ಅಭಿಷೇಕ್ ಹಾಜರಿದ್ದರು.

ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿನ ಜೆಡಿಎಸ್, ಕಾಂಗ್ರೆಸ್ , ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ರಾಜ್ಯದ ಬಿಜೆಪಿಯದ್ದು ಶೇ ೪೦ ಕಮಿಷನ್ ಸರ್ಕಾರ. ಕಾಮಗಾರಿಗಳಲ್ಲಿ ಅವ್ಯವಹಾರ, ಸರ್ಕಾರಿ ನೇಮಕಾತಿ ಅಕ್ರಮ, ವರ್ಗಾವಣೆ ದಂಧೆ, ಕೋವಿಡ್ ಹೆಸರಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ಹತ್ತಿಕ್ಕುವ ಕೆಲಸ ಮಾಡಿತು. ಇದೆಲ್ಲದರ ಪರಿಣಾಮ ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿ ಅಧೋಗತಿಗೆ ಬಂದಿದೆ’ ಎಂದು ದೂರಿದರು. -ಸೈಬಣ್ಣಾ ಜಮಾದಾರ, ಕೆಆರ್‌ಎಸ್‌ಪಿ, ರಾಜ್ಯ ಸಂಘಟನಾ ಕಾರ್ಯದರ್ಶಿ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here